This page has not been fully proofread.

ಮೊದಮೊದಲು ಪ್ರಸ್ಪತ್ವವೆಂಬ ಕಾರಣದಿಂದ
ವಾನುವೃತ್ತಿಯಲ್ಲಿ ಮಾತ್ರೆಗಳ ಕಾಲದ ದ್ವಿಪಾದ ಉಚ್ಚರಿಸಿ
 
ದೇವಾನುದೇವರಿಗೆ ಗೋಚರಿಸಿ ನಿಂದು
ಬಳಿಕ ಆ ಇತರ ವಿವೃತ್ತಿ ಉಚ್ಚರಿಸಿ
ಗೋವಿಂದ ಭಕ್ತರಿಹ ಆನಂದ ತೀರ್ಥರು
 
ಗೋವಿಂದ ನಂತೆಯೇ ಕಂಗೊಳಿಸಿ ಮೆರೆದರು
 
ಮಂಗಳಾಂಗಗಳಿಂದ ಭಾವಗಳ ಪ್ರಕಟಿಸುತ
ಮೂರು ಲೋಕಗಳಲ್ಲಿ ಅಚ್ಚರಿಯ ಮೂಡಿಸುತ
ರಂಗವೆಂಬುವ ಸ್ವರದಿ ವೈಭವದಿ ಮೆರೆಯುತ್ತ
ಸುಸ್ವರದಿ ಶೋಭಿಸುತ ಕಂಗೊಳಿಪ ಆ ದನಿಯು
ಆನಂದ ತೀರ್ಥರ ಆ ವೇದವಾಣಿಯು
ಮತ್ತೊಬ್ಬ ದೌಪದಿಯ ಸ್ವರದಂತೆ ತೋರಿತ್ತು
 
ಔದಾರ್ಯದಿಂದಲೇ ಗಾಂಭೀರ್ಯ ಹುಟ್ಟುವುದು
ಗಾಂಭೀರ್ಯ ಔದಾರ್ಯ ಗುಣ ಭರಿತ ಮಧ್ವರು
ನಾನಾ ನಾದಗಳ ಶ್ಲಾಘಿ ಅಭಿವ್ಯಕ್ತಿ
ಶಿಕ್ಷಾ ಲಕ್ಷಣವೇ ಮೈವೆತ್ತಿ ನಿಂತಂತೆ
ಗುರುವರೇಣ್ಯರ ಆ ವೇದದುಚ್ಚಾರಣೆಯು
ಅನುಪಮವು ಅತಿಶಯವು ಎಂದು ನಾ ಭಾವಿಪೆನು
 
ಕಲ್ಪ ವೇದಾಂಗಗಳ, ವೇದಾರ್ಥ ನಿಯಮಗಳ
ಛಂದಸ್ಸು, ಶಾಸ್ತ್ರಗಳ ನಿಯಮಗಳ ಪ್ರಕಟಿಸುತ
ವ್ಯಾಕರಣ ಶಾಸ್ತ್ರದ ಒಳ ಹೊರಗ ತೋರಿಸುತ
ನಿರುಕ್ತದಲ್ಲಿನ ಶಬ್ದ ನಿರ್ವಚನದಲ್ಲಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತರು ಮಧ್ವರು
ವೇದವನು ಈ ರೀತಿ ವ್ಯಾಖ್ಯಾನಿಸಿದರು
 
ಹನ್ನೆರಡನೆಯ ಸರ್ಗ / 205
 
32
 
33
 
34
 
35