This page has not been fully proofread.

ಆನಂದ ತೀರ್ಥರು ತೇಜೋವಿಲಾಸಿಗಳು
ಅಗ್ನಿಯ ಜ್ವಾಲೆಯಂತವರ ಆ ತೇಜಸ್ಸು
ಪುಂಡರೀಕನು ಒಂದು ಮಿಣಕು ಹುಳುವಂತೆ
 
ಅತ್ಯಂತ ಚಂಚಲನು, ಅತಿ ಅಪ್ರಬುದ್ಧನು
ಆದರೂ ಅವರವನ ಕಡೆಗಣಿಸಲಿಲ್ಲ
ಅವನೂಡನೆ ವಾಗ್ಯುದ್ಧ ಪ್ರಾರಂಭಿಸಿದರು
 
ಶ್ರೀ ಮಧ್ವಾಚಾರ್ಯರ ಅಪೂರ್ವ ವೇದಪಾಠ
ವೇದಾದಿ ವಿದ್ಯೆಯಲ್ಲಿ ಅತಿ ಚತುರ ಮಧ್ವರು
ವೇದ ಪ್ರಮಾಣಗಳ ಸರ್ವ ಭೂಷಿತರವರು
ತಮ್ಮೊಡನೆ ವಾಕ್ಯಾರ್ಥ ಸುಳಿಯಲ್ಲಿ ಸಿಲುಕಿದ
ಪುಂಡರೀಕನನವರು ಸುಲಭದಲ್ಲಿ ಗೆಲಿದರು
ತಮ್ಮ ಸಿದ್ಧಾಂತಕ್ಕೆ ಕನ್ನಡಿಯ ತೋರಿದರು
ವೇದ ವ್ಯಾಖ್ಯಾನವನ್ನು ಮತ್ತೊಮ್ಮೆ ಮಾಡಿದರು
 
ರೂಪ ಪೀಠಾಪುರದ ಬ್ರಾಹ್ಮಣರು ಬಂದು
ಸಭೆಯಲ್ಲಿ ಸೇರಿದರು ಗೌರವದಿ ನಿಂದು
ಅಪ ಪಾಠಗಳು ಅವರ ಸನಿಹದಲಿ ಸುಳಿಯುವು
ಪಠಣಾದಿ ಕ್ರಿಯೆಗಳಲ್ಲಿ ಎಲ್ಲರೂ ಮುಂದು
ಅಂತಹ ಬ್ರಾಹ್ಮಣರು ಮಧ್ವರನು ಕಂಡು
ಕೌತುಕದಿ ನೋಡಿದರು ವೇದವ್ಯಾಖ್ಯಾತೃವನು
 
ಸ್ವರಗಳನ್ನು ಉಚ್ಚರಿಪ ಸೊಬಗಿನ ಬೆಡಗು !
ಮಾತ್ರೆಗಳ ಅಭಿವ್ಯಕ್ತಿಯಲ್ಲಿನ ಸೊಗಸು !
ಪಶ್ಯಂತಿ, ಮಧ್ಯಮ, ವೈಖರಿಗಳೆಂಬುವ
ತ್ರಿಸ್ಥಿತಿಯ ಅಭಿಮಾನಿ ದೇವತೆಗಳೆಲ್ಲ
ಆಚಾರ್ಯ ಮುಖದಿಂದ ಹೊಮ್ಮುವ ವಾಕ್ಯಗಳ
ಕೇಳಿ ನಲಿದಾಡುತ್ತ ಸರಿಸಿದರು ಶ್ರೀ ಹರಿಯ ಆನಂದದಿಂದ
 
204 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31