This page has not been fully proofread.

"ಹಳ್ಳಿ ಹಳ್ಳಿಗಳಲ್ಲಿ ತಡೆಯೊಡ್ಡ ಬೇಕು
ಸಾಮವೇ ಮುಂತಾದ ಯುಕ್ತಿಗಳ ಬಳಸಿ
ಹಳ್ಳಿಗರು ಅವರಿಗೆ ಗೌರವಾದರಗಳನ್ನು
ಸಲ್ಲಿಸುವ ಕಾರ್ಯವನ್ನು ನಿಲ್ಲಿಸಲೇ ಬೇಕು
 
ಮಾನಾಪಹರಣವನು ಮಾಡಬೇಕು
 
ಗ್ರಂಥ ಚೌರ್ಯವ ಮಾಡಿ ಬುದ್ಧಿ ಕಲಿಸಲಿಬೇಕು "
 
ಕುಟಿಲ ಬುದ್ಧಿಯನುಳ್ಳ ಆ ಮಾಯಾವಾದಿಗಳು
ಚಕ್ರಧಾರಿಯ ಭಕ್ತ ಗುರುಮಧ್ವರನು ಆಗ
ಎದುರಾಳಿಗಳನ್ನಾಗಿ ಭಾವಿಸಿದರು.
ಇಲ್ಲವಾದಲ್ಲವರು ದುಃಖವೆಂಬುವ ಉಗ್ರ
ಜಲದಿಂದ ಕೂಡಿದ ಅಂಧತಾಮಿಶ್ರದ
ಸಾಗರದಿ ಮುಳುಗಲು ಅರ್ಹರಾಗುವರೆ ?
 
ರೂಪ್ಯ ಪೀಠಾಪುರದಿ ಆ ಮಾಯಾವಾದಿಗಳು
ಜನತೆಯ ಜೊತೆಯಲ್ಲಿ ಮಿಳಿತಗೊಂಡಿದ್ದು
ವಾಕ್ಯಾರ್ಥ ನೆಪದಲ್ಲಿ ಆನಂದತೀರ್ಥರನು
 
ಅಪಮಾನಗೊಳಿಸುವ ಸಂಚು ಒಂದನು ಹೂಡಿ
 
ಪುಂಡರಿಕ ಪುರಿಯೆಂಬ ಹರಿವೈರಿಯೊಬ್ಬನನು
ಮಧ್ವರ ಎದುರಿನಲಿ ವಾದಕಣಿಗೊಳಿಸಿದರು
 
ಕೇಸರಿಯ ಎದುರೊಂದು ಶ್ವಾನ ಸೆಣಸಿದ ತೆರದಿ
ಹಂಸ ಪಕ್ಷಿಯ ಎದುರು ಕಾಗೆ ಸೆಣಸಿದ ತೆರದಿ
ನರಿಯೊಂದು ಹುಲಿಯೊಡನೆ ಹೋರಾಡಿದ ತೆರದಿ
 
ಆ ಮೂಢ ಪುಂಡರಿಕ ವ್ಯರ್ಥ ಶ್ರಮವನ್ನು ವಹಿಸಿ
ವಿದ್ವದ್ವರೇಣ್ಯ ಆ ಮಧ್ವಮುನಿಗಳನು
ಶಾಸ್ತ್ರಾರ್ಥ ವಾಗ್ಯುದ್ಧಕಾಮಂತ್ರಿಸಿದನು
 
ಹನ್ನೆರಡನೆಯ ಸರ್ಗ / 203
 
24
 
25
 
20
 
27