This page has not been fully proofread.

"ಮಂದಹಾಸವ ಸೂಸಿ ಶೋಭಿಸುವ ಮೂರುತಿ
ಮಧ್ವಮುನಿಗಳ ಕಂಡ ಜನರು ಉಸುರುವರು
'ಇವರೇನು ಸಾಕ್ಷಾತ್ತು ವ್ಯಾಸಮುನಿವರ್ಯರೋ
ವೇದಗಳೆ ಮೈವೆತ್ತಿ ಇಳೆಗಿಳಿದ ಮಹಿಮರೋ'
ಇಂಥ ಮಾತನು ಕೇಳಿ ನಮಗಿಂದು ಅನಿಸುತಿದೆ
ಮಾಯಾವಾದದ ಮೂಲ ತತ್ತರಿಸಿ ಬೀಳುತಿದೆ
 
"ನಮ್ಮ ಪಕ್ಷದ ಕೆಲರು ಹೀಗೆ ನುಡಿಯುತಲಿಹರು
"ಮಧ್ವಮುನಿ ರಚಿಸಿರುವ ಬ್ರಹ್ಮಸೂತ್ರದ ಭಾಷ್ಯ
ಅಕ್ಲಿಷ್ಟವಾಗಿಹುದು, ಋಜು ಮಾರ್ಗದಲ್ಲಿಹುದು
ನಮಗೇನು ಕ್ಷತಿ ಇರದು ಈ ಭಾಷ್ಯದಿಂದ
ಇಂತೆಂದು ಹೇಳುತ್ತ ಆ ನಿರ್ಲಜ್ಜ ಜನರು
ಮುಳುಗಿಸಿಹರೆಮ್ಮನ್ನು ಲಜ್ಞಾ ಸಮುದ್ರದಲ್ಲಿ
 
"ಮಧ್ವಮುನಿ ಶಿಷ್ಯರು ಸೌಜನ್ಯ ಶೀಲರು
ಶಂಖ, ಚಕ್ರವ ತೊಟ್ಟ ವೈಷ್ಣವಾಗ್ರಣಿಗಳು
ಈ ಶಿಷ್ಯ ಜಾಲಗಳು ಸಭೆಯೆಂಬ ಸಾಗರದಿ
ಶೋತೃಮನವೆಂಬುವ ಜಲಚರಗಳನ್ನು
ಸೆರೆಹಿಡಿಯದಂತಿರುವ ಯಾವುದಾದರೂ ಒಂದು
ಯುಕ್ತಿಯನ್ನು ನಮ್ಮಗಳ ಕ್ಷೇಮಕ್ಕೆ ಯೋಚಿಸಿರಿ
 
"ಬ್ರಹ್ಮ ಸಗುಣತ್ವವನು ಸಾರುವರು ಇವರು
ನಿರ್ಗುಣ ಬ್ರಹ್ಮನನು ಖಂಡಿಸುವರಿವರು
ಹಂಸಗಳ ಧ್ವನಿಯನ್ನು ಅಡಗಿಸುವ ಮುಗಿಲುಗಳು
ಜಲಧಾರೆ ಸುರಿಸುತ್ತ ಶರಧಿ ಉಕ್ಕಿಸುವಂತೆ
ನಮ್ಮ ಪಕ್ಷದ ಸೊಲ್ಲ ಅತಿಯಾಗಿ ಅಡಗಿಸುತ
ಸಗುಣ ಬ್ರಹ್ಮನ ವಾದ ಬಲವಾಗಿ ಸಾರಿಹರು
 
200 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15