This page has not been fully proofread.

"ಮಾಯಾವಾದವದು ದುರ್ಗಮದ ಕಾನನವು
ಭಾಟ್ಟ ಮೀಮಾಂಸಕರು ಇದರಲ್ಲಿ ಭ್ರಷ್ಟರು
ಪ್ರಭಾಕರನ ಪ್ರಭೆಯೆಲ್ಲ ಇದರಲ್ಲಿ ನಿಂದಿಹುದು
ಇದ ಕಂಡು ಬೌದ್ದರು ಭೀತಿಗೊಂಡಿಹರು
 
ಇಂತಹ ಕಾನನವ ಸುಡಲು ಮುಂದಾಗಿರುವ
 
ತತ್ವವಾದಾಗ್ನಿಯನ್ನು ಕಡೆಗಣಿಸಬಹುದೆ ?
 
"ನಮ್ಮ ನಾಯಕರಾದ ಶ್ರೀ ಪದ್ಮತೀರ್ಥರು
ಮಧ್ವ ಮುನಿಗಳು ಸೇರಿ ಹೊರ ಹೊರಟ ಸ್ಥಳದಿಂದ
ಮುನ್ನಡೆದು ಬರದಿರಲು ಪಣವ ತೊಟ್ಟಿದ್ದರು
ಆದರದು ಮಧ್ವರನು ತಡೆಯದೆ ಹೋಯ್ತು
ಮುನ್ನುಗ್ಗಿ ಮುನ್ನುಗ್ಗಿ ಬರುತಲೇ ಇಹರವರು
ಅಕಟಕಟ ! ನಾವೆಂಥ ನತದೃಷ್ಟರಾಗಿಹೆವು !
 
'ಪ್ರತಿವಾದಿ ಪ್ರಶ್ನೆಗೆ ಉತ್ತರವು ಸಿದ್ಧ
ಬೇರಾರೂ ಖಂಡಿಸಲು ಸಾಧ್ಯವಿಲ್ಲದ ಪ್ರಶ್ನೆ
ಮಧ್ವಮುನಿ ಬಿಡಿಸುವರು ಚತುರೋಕ್ತಿಯಿಂದ
ಪ್ರತಿವಾದಿ ಗುಂಪನ್ನು ಲಜ್ಜೆಗೊಳಪಡಿಸುವರು
ಇಂತಹ ಮಾತುಗಳು ಎಲ್ಲೆಲ್ಲೂ ಕೇಳುತಿವೆ
ನಾವೀಗ ಮಾಡುವುದು ಏನೆಂಬ ಅರಿವಿಲ್ಲ
 
"ಸಪಾದ ಲಕ್ಷದ ಸಂಖ್ಯೆಗಳ ಶ್ಲೋಕಗಳು
ಅತಿ ಪುರಾತನವಹುದು ಈ ಮಾಯಾವಾದ
ಇಂತಹ ಶಾಸ್ತ್ರವನ್ನು ಆನಂದ ತೀರ್ಥರು
ಒಂದೆರಡು ವಾಕ್ಯದಲ್ಲಿ ಖಂಡಿಸುತ್ತಿಹರು
ಇಂತೆಂಬ ಮಾತುಗಳ ಹೇಳುವರು ಪಾಂಥರು
ಇದರಿಂದ ನೊಂದಿರುವ ನಾ ಬಂದೆ ನಿಮ್ಮ ಬಳಿ
 
ಹನ್ನೆರಡನೆಯ ಸರ್ಗ / 199
 
8
 
9
 
10
 
11