This page has not been fully proofread.

ಶ್ರೀ ಗುರುಭೋ ನಮ:
 
ಹನ್ನೆರಡನೆಯ ಸರ್ಗ
 
ಮಾಯಾವಾದಿಗಳಿಗಾದ ವಿಷಾದ
 
ಮಧ್ವಮುನಿಗಳು ಒಬ್ಬವೇದಾಂತಿ ಸಿಂಹರು
 
ವ್ಯಾಖ್ಯಾನ ಪ್ರವಚನದಿ ವಿಜೃಂಭಿಸುವರು
ಪ್ರತಿವಾದಿ ಎಂಬುವ ಕಾಡಾನೆಗಳಿಗೆಲ್ಲ
ಭಯವನ್ನು ಹುಟ್ಟಿಸುತ ಕಾಡುವವರವರು
ಆನಂದ ತೀರ್ಥರ ಸಿಂಹ ಗರ್ಜನೆಯಿಂದ
ಕೋಭೆಗೊಂಡಿತು ಅಲ್ಲಿ ಮಾಯಿಗಳ ನರಿಹಿಂಡು
 
ಅವರು ನಡೆಸಿದ ಸಭೆಯ ಪೂರ್ವಾಪರ
 
ಭುವನ ಭೂಷಣರಾದ ಆ ವಾಯುದೇವರಲಿ
ಚೋಲಜ ದ್ವೀಪಿಗಳು ಮುಂತಾದ ಪಾಪಿಗಳು
ಅತಿಯಾದ ಮಾತ್ಸರ್ಯ ಮಧ್ವರಲಿ ತಳೆದು
ಹಿಂದೊಮ್ಮೆ ಮರುಳರು ಕುರುಪತಿಯ ಬಳಿಯಲ್ಲಿ
ವಂಚನೆಯ ಸಂಚುಗಳ ನಡೆಸಿದ ಹಾಗೆ
 
ಮಧ್ವರನು ತಗ್ಗಿಸುವ ಸನ್ನಾಹ ನಡೆಸಿದರು
 
ಇಂತು ಆ ವಂಚಕರ ಸಂಚಿನ ಸಭೆಯಲ್ಲಿ
ಗಾಂಧಾರ ದೇಶದ ರಾಜಪುತ್ರನ ತೆರದಿ
ಕುಟಿಲ ನೀತಿಗಳಲ್ಲಿ ನಿಷ್ಣಾತನಾಗಿದ್ದ
ವಾಚಾಳಿಯೋರ್ವನು ಎದ್ದು ನಿಲ್ಲುತ್ತ
ಸಜ್ಜನರ ವಿಷಯದಲ್ಲಿ ಮಾತ್ಸರ್ಯ ತುಂಬುತ್ತ
ಪದ್ಮತೀರ್ಥನಿಗವನು ಇಂತೆಂದು ಉಸುರಿದನು
 
1
 
2
 
3