This page has not been fully proofread.

ವೈಕುಂಠ ವಾಸಿಗಳು ಬಲುಬಗೆಯ ಪರಿಣತರು
ಯಜ್ಞಶೀಲರು ತಮ್ಮ ಯಜ್ಞ ಕಾರ್ಯಗಳಿಂದ
ಯಜ್ಞನಾಮಕ ಹರಿಯ ಆರಾಧಿಸುವರು
ಪ್ರವಚನದ ಪಟುಗಳು ಹರಿಯ ಪಾರಮ್ಯಕರು
ಗಾನಲೋಲನ ಸ್ತುತಿಸಿ ಗಾಯಕರು ಹಾಡುವರು
ವಿಧ್ಯಬದ್ದರು ಇವರು, ಆನಂದ ಸಾಂದ್ರರು
ವೈಕುಂಠ ವಾಸಿಗಳ ಶೋಭಾ ವಿಶೇಷ
ಮಾತು, ಮನಗಳಿಗೆಂದೂ ನಿಲುಕದಂತಹವು
ಸಾಕ್ಷಾತ್ತು ಹರಿಯಿಂದ ಸನ್ನಿಹಿತವಾದ
ಶ್ರೀ ಲಕುಮಿ, ಬ್ರಹೇಂದ್ರ ರುದ್ರಾದಿ ದೇವಗಣ
ಗರುಡ ಶೇಷಾದಿಗಳ ಮತ್ತೆಲ್ಲ ಮುಕ್ತರ
ಲೋಕದಲಿ ಈ ಹಿರಿಮೆ ಅತಿ ಯುಕ್ತವಹುದು
ವೈಕುಂಠದ ಹಿರಿಮೆ
 
ವೈಕುಂಠ ಲೋಕವದು ಸಂಕಲ್ಪ ಲೋಕ
 
ಅಲ್ಲಿಯ ವಾಸಿಗಳು ಅತ್ಯಂತ ಸುಖಿಗಳು
ಯಾರಾರು, ಯಾವ್ಯಾವ ವಿಷಯವನು ಬಯಸುವರೊ
 
ಎಲ್ಲವೂ ಲಭಿಸುವುದು ಸಂಕಲ್ಪದಿಂದ
ಇಂತೆಂದು ವೇದಗಳು ಪ್ರತಿಪಾದಿಸುವುವು
ಇಂಥ ಮುಕ್ತಿಗೂ ಮಿಗಿಲು ಬೇರಾವ ಸಿರಿ ಇಹುದು ?
 
ಮುಕ್ತಿಗೆ ಸಾಧನ
 
ಆ ಸುರರು ಮೊದಲಾಗಿ ನರರವರೆಗೂ ಕೂಡ
ಆನಂದ ತೀರ್ಥರ ಭಾಷ್ಯ ಭಾವವ ಅರಿತು
ಯೋಗ್ಯತೆಗೆ ಅನುಗುಣದ ಮಾತು ಮನಸುಗಳಿಂದ
ಬಾರಿಬಾರಿಗೂ ಯಾರು ಶ್ರವಣವನ್ನು ಮಾಡುವರೊ
ಅಂಥವರು ನರಹರಿಯ ಕರುಣೆಯನ್ನು ಪಡೆಯುವರು
ವೈಕುಂಠ ಲೋಕದಲ್ಲಿ ಸ್ಥಾನವನ್ನು ಗಳಿಸುವರು
 
76
 
77
 
78
 
79
 
ಎಂಬಲ್ಲಿಗೆ ಶ್ರೀಮತ್ಕವಿಕುಲ ತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಹನ್ನೊಂದನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ
 
194 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ