This page has not been fully proofread.

ಶಿಶಿರನ ಹಿರಿಮಯನು ಅರಿಯದವರಾರು ?
ಸ್ಪಟಿಕಮಯ ಪರ್ವತ ಮುದವ ನೀಡುವನವನು
ಹಿಮಭರಿತ ಹೇಮಂತನಾಪ್ತ ಸಖನಿವನು
ಫಲಿನಿ ಕುಲ ಕುಸುಮಗಳಿಗಾಸರೆಯ ನೀಡುವನು
ಅರಳಿರುವ ನವ ಕುಂದ ಪುಷ್ಪಗಳ ಕಾಂತಿಯಲಿ
ಶಿಶಿರ ನಗುತಿಹನೆಂಬ ಕಲ್ಪನೆಯು ಮೂಡಿಹುದು
 
ವೈಕುಂಠ ಲೋಕವದು ಆರು ಋತುಗಳ ತವರು
ಹಿಮ, ಶೀತ ವರ್ಷಗಳ ದೋಷ ವಿಲ್ಲವು ಇವ
ಮುಕ್ತ ಜನರಾರಿಗೂ ಬಾಧೆ ಇವುಗಳದಿರದು
ಎಲ್ಲ ಋತುಗಳೂ ಇಲ್ಲಿ ಆಪ್ಯಾಯಮಾನ
ಹಿತಕಾರಿಯಾಗಿಹವು ವೈಕುಂಠ ಜನತೆಗೆ
ಋತುಗಣವೂ ನಿರ್ದೋಷವೆಂಬುದೇ ಸೋಜಿಗವು
 
ವೈಕುಂಠ ವಾಸಿಗಳು ಸಹಜದಲ್ಲಿ ಮುಕ್ತರು
ನಿರ್ದಿಷ್ಟ ಕರ್ಮಗಳ ಬಂಧನವು ಅಲ್ಲಿಲ್ಲ
ಕರ್ಮದಾಚರಣೆಯಲ್ಲಿ ಅವರು ಸ್ವತಂತ್ರರು
ಆದರೂ ಕರ್ಮದಲ್ಲಿ ಅವರೆಲ್ಲ ತೊಡಗುವರು
ಫಲಪುಷ್ಪಮಾಲೆಗಳ ಶ್ರೀ ಹರಿಗೆ ಅರ್ಪಿಪರು
ಸಕಲ ಸಜ್ಜನ ಪ್ರಕೃತಿ ಸರ್ವದಾ ಒಂದಿಹುದು
 
ಪ್ರಮದೆಯರು ಆನಂದದತಿರೇಕದಿಂದ
ಶೃಂಗಾರವನದೊಳಗೆ ಸ್ಪಚ್ಛಂದ ವಿಹರಿಸುತ
ಪ್ರಿಯತಮರ ಜೊತೆಯಲ್ಲಿ ಸತತವೂ ಸುಖಿಸುತ್ತ
ಗಾನದಸುಧೆಯಮೃತವ ಎಲ್ಲೆಲ್ಲೂ ಹಂಚುತ್ತ
ಮಧುವೈರಿ ಚರಿತೆಯನು, ಮಧುರ ಸವಿಗೀತೆಯನು
ಮಧುರವಾಣಿಯಲವರು ಸತತ ಪಾಡುತಲಿಹರು
 
186 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47