This page has not been fully proofread.

"ಆ ಪುರದ ಮನೆಮನೆಯೂ ಭವ್ಯತೆಯ ಬೀಡು
ತುಲೋಪಗತವಾದ ಚಿತ್ರ ಸುವಿತಾನಗಳ
ಅಡಿಯಲ್ಲಿ ಜೋಲುತಿಹ ಮಣಿರತ್ನ ಮಾಲೆಗಳು
ಮನೆಯ ಒಳ ಹೊರಗೆಲ್ಲ ತುಂಬಿ ತುಳುಕುತಲಿಹುದು
ಮಣಿಕಾಂತಿ ಪ್ರಖರತೆಯು ಹೊರಚೆಲ್ಲಿ ಹರಡಿಹುದು
ಎಂಬ ವಿಭ್ರಮೆ ಎಲ್ಲ ನೋಟಕರಿಗಹುದು
 
"ಶ್ರೀ ಹರಿಯ ನಗರಿ ಇದು ಭವ್ಯತೆಯ ಬೀಡು
ಸಕಲ ವಸ್ತುಗಳಲ್ಲಿ ಸ್ವರ್ಣ ಮಣಿ ಮಾಲೆಯಲಿ
ಸನ್ನಿಹಿತಳಾಗಿಹಳು ಶ್ರೀ ರಮಾದೇವಿ
 
ಅಳೆಯಲಾಗದು ಇದನು ಮನುಜರ ಮಾನದಂಡದಿಂದ
 
ಅತಿಶಯೋಕ್ತಿಯ ನುಡಿವ ಕವಿವರ್ಯರೂ ಕೂಡ
ಸೋಲುವರು ಬಣ್ಣಿಸಲು ಇಂಥ ವೈಭವವ
 
"'ಜನನಿಬಿಡವಾಗಿಹುದು ಮುಕುತರಿಂದೀ ನಗರಿ
ಬ್ರಹ್ಮದೇವರು ಪ್ರಮುಖ ಈ ಮಂದಿಯಲ್ಲಿ
ಅತಿ ಪೂರ್ವ ಕಾಲದಿಂ ಬರುತಿಹರು ಜನರಿಲ್ಲಿ
ಆದರೂ ಕಿಂಚಿತ್ತು ಜನರ ದಟ್ಟಣೆ ಇಲ್ಲ
ಎಲ್ಲೆಲ್ಲೂ ವಿಸ್ತಾರ ಬಯಲು ಪ್ರದೇಶಗಳು
ಶ್ರೀ ಹರಿಯ ಮಹಿಮೆಯನು ಏನೆಂದು ಬಣ್ಣಿಪುದು ?
 
"ಹಲವಾರು ದಿವಿನಾದ ಮಂದಿರಗಳುಂಟಲ್ಲಿ
ಒಂದೊಂದು ಮಂದಿರವೂ ಅಷ್ಟಷ್ಟು ಶ್ರೇಷ್ಠ
ದೇವಮಂದಿರಗಳ ನಿವಹಗಳ ನಡುವೆ
ಸಕಲ ಭುವನದ ಒಡೆಯ ಶ್ರೀ ಹರಿಯ ಮಂದಿರ
ಮೂರು ಲೋಕದ ಎಲ್ಲ ಅದ್ಭುತವ ಮೀರಿದುದು
ನಕ್ಷತ್ರ ಪುಂಜದಲಿ ಚಂದ್ರ ಮಂಡಲದಂತೆ
 
178/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15