This page has not been fully proofread.

"ಫಲವನ್ನು ಚೆನ್ನಾಗಿ ಅರಿತ ಅಧಿಕಾರಿಗಳು
ಶಾಸಶ್ರವಣಗಳಲ್ಲಿ ಪ್ರವೃತ್ತರು ತಾವು
ಪ್ರೋತೃವಿಗೆ ಮುದ ಕೊಡುವ ವಾಗ್ರಿಗಳು ತಾವು
ಜ್ಞಾನಾದಿ ಸಕಲ ಗುಣ ಪರಿಪೂರ್ಣರು
ಮಧ್ವ ಶಾಸ್ತ್ರದ ಶ್ರವಣ ಪಠನಾದಿ ಫಲವನ್ನು
 
ವಿವರದಲ್ಲಿ ತಾವೆಮಗೆ ಹೇಳಬೇಕು "
 
ಶ್ರೀ ಶೇಷದೇವರಿಂದ ಶ್ರೀ ಮಧ್ವಭಾಷ್ಯದ ಫಲಶೃತಿ
 
ಸನಕಾದಿ ಮುನಿಗಳ ಮಾತನ್ನು ಆಲಿಸುತ
ಶ್ರೇಷ್ಠತಮ ಅರಿವನ್ನು ಪಡೆದ ಆ ಶೇಷರು
"ಮರ್ತ್ಯರಿಗೆ ಅತಿ ಪೂಜ್ಯ ಮಧ್ವ ಶಾಸ್ತ್ರ
ಮಧ್ವರಾ ಈ ಕೊಡುಗೆ ಅತ್ಯಮೂಲ್ಯ
ಮಧ್ವ ಶಾಸ್ತ್ರದ ಶ್ರವಣ ಅತಿ ಪೂಜನೀಯ
ಅದರ ಶ್ರವಣದ ಫಲವ ತಿಳಿಸುವೆನು ಕೇಳಿ
 
"ಬೇಸಾಯ ಕಾರ್ಯದಲ್ಲಿ ಧಾನ್ಯವೇ ಮುಖ್ಯ
ಹುಲ್ಲು ಹೊಟ್ಟುಗಳೆಲ್ಲ ಗೌಣವಾಗುವುವು
ಮಧ್ವಶಾಸ್ತ್ರದ ಶ್ರವಣ ಅದರಂತೆ ಇಹುದು
ಸ್ವರ್ಗ ಲೋಕದಿ ಸ್ಥಾನ ಇದರಿಂದ ಸಿಗಬಹುದು
ಆದರದು ಗೌಣ; ಆದು ಮುಖ್ಯ ಫಲವಲ್ಲ
ಶಾರದಾ ಶುಕರೆಲ್ಲ ವರ್ಣಿಸಿಹ ಮೋಕ್ಷವೇ ಮುಖ್ಯಫಲವಹುದು
 
'ಸುರರಲ್ಲಿ ಅತಿ ಶ್ರೇಷ್ಠ ಶ್ರೀ ವಾಯುದೇವರು
 
ಭೂಮಿಯಲಿ ಆನಂದ ತೀರ್ಥರಾಗಿಹರು
ಸಕಲ ಸಚ್ಛಾಸ್ತ್ರಗಳೂ ಇವರಿಂದ ರಚಿತ
ಶ್ರವಣ ಮನನಗಳಿಂದ ಪರಮ ವೈಷ್ಣವ ದೀಕ್ಷೆ
ಪಡೆವ ಸಜ್ಜನಕೆಲ್ಲ ಆ ನಮ್ಮ ಶ್ರೀ ಹರಿಯು
ಕರುಣಿಪನು ವೈಕುಂಠ ಲೋಕ ರಂಜನೆಯ
 
176/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7