This page has not been fully proofread.

ಅ೦ದಿನಾ ಕಾಲದಲಿ ಎಲ್ಲ ಕಡೆಯಲ್ಲಿ
ಮಾಯಾವಾದದ ಬಿಳಲು ಜನಮನದಿ ಮೂಡಿತ್ತು
 
ವಿರೋಧಾಭಾಸಗಳ ಸರಮಾಲೆ ಈ ವಾದ
ಮಧ್ವರ ವ್ಯಾಖ್ಯಾನ ಅತಿ ತರ್ಕಬದ್ಧ
ಯಾರಿಂದಲೂ ಅದನು ಖಂಡಿಸಲಸಾಧ್ಯ
ಅಷ್ಟಾಂಗ ತರ್ಕದಲ್ಲಿ ಅದು ಶೋಭಿಸಿತ್ತು
 
ಕುರುಕ್ಷೇತ್ರದಲ್ಲಿ ತೋರಿದ ವಿಶೇಷ ಮಹಿಮ
 
ಕುರುಕ್ಷೇತ್ರವೆಂಬುದು ಅತಿ ದಿವ್ಯ ಕ್ಷೇತ್ರ
ಅರಸರಿಗೆ ಸ್ವರ್ಗದ ದಾರಿ ತೋರುವ ಕ್ಷೇತ್ರ
ಆಚಾರ್ಯ ಪರಿವಾರ ಅಲ್ಲಿ ತೆರಳಿತ್ತು
ಮಾರೀಚನಾಗಲಿಹ ವ್ಯಕ್ತಿಯೊಬ್ಬನ ಕಂಡು
ಭೀಮಸೇನನ ದಿವ್ಯ ಗದೆಯನ್ನು ನೋಡಿ
ದ್ವಾಪರದ ಯುದ್ಧದ ವೈಭವವ ಸ್ಮರಿಸಿದರು
 
ವೋಮಕೇಶನಿಂದ ನಡೆದ ಪೂಜೆ
 
ಬಳಿಕವರು ತೆರಳಿದರು ಹೃಷಿಕೇಶ ಕ್ಷೇತ್ರಕ್ಕೆ
ಧವಳ ಕಾಂತಿಯ ಶಿವನು ಕ್ಷಣ ಮಾತ್ರ ಗೋಚರಿಸಿ
ನಮಿಸಿದನು ಮಧ್ವರಿಗೆ ಅತಿ ವಿನಯದಲ್ಲಿ
ಭಕ್ತನಿಗೆ ಸ್ವಪ್ನದಲ್ಲಿ ದರುಶನವ ನೀಡಿ
ಮೃಷ್ಟಾನ್ನ ಭೋಜನವ ಪರಿವಾರಕರ್ಪಿಸಿ
ಶ್ರೀಮದಾಚಾರ್ಯರಿಗೆ ಸತ್ಕಾರ ಮಾಡಿದನು
 
ಇಷುಪಾತದಲ್ಲಿ ತೋರಿದ ಮಹಿಮೆ
 
ಇಹುಪಾತವೆಂಬುವ ಮತ್ತೊಂದು ಕ್ಷೇತ್ರದಲ್ಲಿ
ಕ್ಷೇತ್ರಾಧಿಪತಿಯಾದ ಶ್ರೀ ಪರಶುರಾಮರಿಗೆ
ಪೂಜೆಯನು ಸಲಿಸಿದರು ಅತಿ ಭಕ್ತಿಯಿಂದ
ರಾಜಕೇಲಿ ಎಂಬ ಬಾಳೆಯ ಹಣ್ಣುಗಳ
ಭುಜಿಸಿದರು ಮಧ್ವಮುನಿ ಸಾವಿರದ ಸಂಖ್ಯೆಯಲ್ಲಿ
ಜನ ನೋಡಿ ನಲಿದರು ಅಚ್ಚರಿಯ ಕಂಡು
 
ಹತ್ತನೆಯ ಸರ್ಗ / 169
 
48
 
49
 
50
 
51