This page has not been fully proofread.

ಶ್ರೀ ಮಧ್ವ ವಿಜಯ
 
ವ್ಯಾಸ ಶಿಷ್ಯತ್ತಮರು ಆನಂದ ತೀರ್ಥರು
 
ತಿಳಿವೆಂಬ ತಿಳಿಯಾದ ಬೆಳಕ ಮಿಂಚುಗಳಿಂದ
 
ಮೌಡ್ಯವೆಂಬುವ ಕಾಳ ಕತ್ತಲೆಯ ಕಿತ್ತರು
ಜೊನ್ನವೆಂಬುವ ಹೊನ್ನ ಸಂಪದವ ಹೊಂದಿರುವ
ಆಶ್ವಯುಜ ಚಂದ್ರಮನು ಬಾನಿನಲಿ ಹೊಳೆವಂತೆ
ವಿಬುಧ ಸಭೆಯಲ್ಲವರು ಕಂಗೊಳಿಸಿ ಮೆರೆದರು
 
ಕಾಲಕಾಲದೊಳೆಲ್ಲ ಸೃಷ್ಟಿ ಸ್ಥಿತಿ ಗತಿಗಳು
ಕಾಲಕಾಲದೊಳು ಸಂಹಾರ ಲಯಗಳು
 
ಎಲ್ಲವೂ ನಡೆಯುವುವು ಬ್ರಹ್ಮಸಂಕಲ್ಪದಲಿ
ಕಾಲ ನಿರ್ಧರಿಸುವ ನಾಶವವ ಹೊಂದನು
 
ವೇದಾದಿ ಶಾಸ್ತ್ರದೊಳು ಸಕಲ ಚೇತನದಲ್ಲೂ
ನೆಲೆಸಿರುವ ಶಕ್ತನವ, ಸರ್ವ ಸ್ವತಂತ್ರ
 
ಶ್ರೀ ಹರಿಯು ಜಗಕೆಲ್ಲ ಬಳಿ ಇರುವ ಬಂಧು
ಜಗದೊಡನೆ ಹಗಲಿರುಳು ಆಟವಾಡುವನವನು
ದುಷ್ಟರನು ಶಿಕ್ಷಿಸುತ ಶಿಷ್ಟರನು ರಕ್ಷಿಪನು
ಮುಕುತಿಯೋಗ್ಯರನವನು ನಿರ್ದೋಷಿಯಾಗಿಪನು
 
ದೋಷ ವರ್ಜಿತನವನು ಕಲ್ಯಾಣ ಗುಣ ಪೂರ್ಣ
ಸಾದಿ ಪ್ರಕೃತಿ ಗುಣ ರಹಿತನವನಾಗಿಹನು
 
"ಸಮಾಭ್ಯಧಿಕ ರಹಿತನವ ಲಕುಮಿಪತಿ ಹರಿಯು
ಜಗದೆಲ್ಲ ರೂಪದಲಿ ಆತ ಭಿನ್ನ
ಆಗಮಗಳೆಲ್ಲದರ ಇದುವೆ ಸಾರ'
ಮುಂತಾದ ಹಿರಿದಾದ ಅರ್ಥಗಳನೆಲ್ಲ
ಆನಂದ ತೀರ್ಥರ ವ್ಯಾಖ್ಯಾನವೆಲ್ಲ
ವಿವರದಲಿ ತಿಳಿಸಿಹವು ಸುಜ್ಞಾನಿಗಳಿಗೆ
 
168/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47