This page has not been fully proofread.

ಅನೇಕ ತೆರನಾದ ಚೋರರನ್ನು ಜಯಿಸಿದ್ದು
ಮತ್ತೊಮ್ಮೆ ಚೋರರ ಗುಂಪೊಂದು ಬಂದು
ಮಧ್ವರ ಶಿಷ್ಯರಿಗೆ ಕಿರುಕುಳವ ನೀಡಿದರು
ಆಗಲಾ ಮಧ್ವಮುನಿ ಗಂಟೊಂದ ಹಿಡಿದು
ಅದರೊಳಗೆ ಹಣವಿರುವ ಭ್ರಾಂತಿಯನ್ನು ಹುಟ್ಟಿಸಿ
ಸಂಶಪ್ತಕರ ಸಂಗ ಪಾರ್ಥ ಮಾಡಿದ ತೆರದಿ
ಚೋರರೆಲ್ಲರ ನಡುವೆ ಕಲಹವೇರ್ಪಡಿಸಿದರು
 
ಇನ್ನೊಮ್ಮೆ ಮಧ್ವರನು ಹತ್ಯೆಗೈಯಲು ಎಣಿಸಿ
ಶೂರರೆಂದೆನಿಸಿದ್ದ ನೂರಾರು ಚೋರರು
ಒಮ್ಮೆಲೇ ನುಗ್ಗಿದರು ಪರಿವಾರದೆಡೆಗೆ
 
ಎದೆಗುಂದಿ ಕಂಗೆಡದ ಆನಂದ ತೀರ್ಥರು
ಶಿಷ್ಯನೊಬ್ಬನ ಕರೆದು ಕೊಡಲಿಯೊಂದನು ನೀಡಿ
ಕಳ್ಳರನು ಬಡಿದಟ್ಟಿ ಹಿಮ್ಮೆಟ್ಟಿಸಿದರು.
 
ಮತ್ತೊಂದು ಸ್ಥಳದಲ್ಲಿ ಮತ್ತೊಂದು ಬಾರಿ
ಮಧ್ವ ಪರಿವಾರವನು ಸಂಧಿಸಿದ ಚೋರರಿಗೆ
ಶಿಲೆಯ ಪ್ರತಿಮೆಗಳಂತೆ ಮಧ್ವಗಣ ಕಂಡಿತು
ಇದರಿಂದ ಖತಿಗೊಂಡು ಮುನ್ನಡೆದ ಚೋರರು
ಹಿಂದಿರುಗಿ ನೋಡಿದರೆ ಮತ್ತೆ ಮನುಜರೆ ಅವರು!
ಮಧ್ವಮಹಿಮೆಯ ಕಂಡು ಉದ್ದಂಡ ನಮಿಸಿದರು
 
ಶ್ರೀ ಸತ್ಯತೀರ್ಥರ ರಕ್ಷಣೆ
 
ಮಧ್ವಮುನಿಗಳ ಶಿಷ್ಯ ಶ್ರೀ ಸತ್ಯತೀರ್ಥರು
ಹಿಮಗಿರಿಯ ಪ್ರಾಂತದಲ್ಲಿ ಸಂಚರಿಸುತಿರಲು
ದೈತ್ಯನೊಬ್ಬನು ಬಂದು ವ್ಯಾಘ್ರರೂಪದಿ ನಿಂತು
ಸತ್ಯತೀರ್ಥರ ಹತ್ಯೆಗೈಯಲೆತ್ನಿಸಿದ
ಇದ ಕಂಡು ಮಧ್ವಮುನಿ ಬಹು ಕೃದ್ಧಗೊಂಡು
ಹಸ್ತತಾಡನದಿಂದ ದೈತ್ಯನನು ವಧಿಸಿದರು
 
162 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23