This page has not been fully proofread.

"ಗಂಗೆ ಹರಿದಿಹಳಿಲ್ಲಿ ಭೀಬತ್ಸ ರೂಪದಲಿ
ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ?
ನಾವೆಗಳ ನೆರವಿಲ್ಲದೆ ತೀರವನ್ನು ಸೇರಿದಿರೆ ?"
ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ
 
ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು
 
ನಸುನಗುತ ನುಡಿದರು ಶ್ರೀ ಹರಿಯ ಭಕ್ತರು
 
"ಯಾವ ದೇವರು ಜಗವ ದಿನನಿತ್ಯ ಬೆಳಗುವನೊ
ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ
ಯಾವ ಪರಮಾತ್ಮನು ಸೂರನೊಳು ಅಡಗಿಹನೊ
ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು
ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು"
ಎಂದವರು ಉಸುರಿದರು ತುರುಕ ಭಾಷೆಯಲ್ಲಿ
 
ಆನಂದ ತೀರ್ಥರ ಮೇರುತರ ಂಭೀರ್ಯ
ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು
ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು
ಕಾಲ ದೇಶಕ್ಕೆ ತಕ್ಕ ಸ್ಪುಟವಾದ ಮಾತು
ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ
ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ
 
ಎಂಥದೀ ಸೋಜಿಗವು ! ಎಂಥದೀ ಅದ್ಭುತವು !
ದಂಡಾರ್ಹವೆನಿಸಿದರು ರಾಜಭಟರಿಗೆ ಅವರು
ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು
ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ
 
ಆದರೂ ಸಂಯಮದಿ ಮಾತುಕತೆ ನಡೆಸಿದರು
ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ
 
ಹತ್ತನೆಯ ಸರ್ಗ / 161
 
16
 
17
 
18
 
19