This page has not been fully proofread.

ಗರುಡ ಮಂತ್ರವ ಬಲ್ಲ ಶ್ರೇಷ್ಠ ಮಾನವನೊಬ್ಬ
ಮಂತ್ರದಲ್ಲಿ ಹಾವುಗಳ ಸೆರೆ ಹಿಡಿವ ಹಾಗೆ
ಬಿರುನುಡಿಯ ಬಲದಿಂದ ಆನಂದ ತೀರ್ಥರು
ತಡೆಹಿಡಿದು ನಿಲಿಸಿದರು ತುರುಕ ಭಟರನ್ನು
ಮರಣ ಭಯವೆಂಬುವ ನದಿಯನ್ನೇ ಅಲ್ಲದೆ
 
ದೇವನದಿಯನು ಕೂಡ ಪರಿಜನರು ದಾಟಿದರು
 
ತುರುಕ ಕಿಂಕರ ಸಂಖ್ಯೆ ಸಾವಿರದಲಿಹುದು
ಆದರೂ ಮಧ್ವಮುನಿ ನಿರ್ವಿಕಾರರು ಅಹುದು
ಜಗವೆಲ್ಲ ಸಲಹುವ ಮಾರುತನ ಅವತಾರ
ಕ್ರೂರ ಕಿಂಕರರ ಭಯ ಅವರಿಗೇಕೆ ?
ನರಿಗಳ ಗುಂಪಿನಲಿ ಕೇಸರಿಯು ಇರುವಂತೆ
ಕಂಗೊಳಿಸಿ ಮೆರೆದರು ಆನಂದ ತೀರ್ಥರು
 
ತುರುಕ ರಾಜನು ತನ್ನ ಸೌಧ ಶಿಖರದಿ ನಿಂತು
ತನ್ನ ನಗರಿಯ ಹೊಕ್ಕ ಆನಂದ ತೀರ್ಥರನು
ಎವೆ ಇಕ್ಕದೇ ನೋಡಿ ಆಶ್ಚರ್ಯಗೊಂಡನು
ಏನಿವರ ಸೌಷ್ಠವ ! ಏನಿದೀ ಮೈಮಾಟ !
ದೇವ ದಾನವರಿಂದ ನಡುಗಿಸಲಸಾಧ್ಯ !
ಆ ನೃಪತಿ ಮಧ್ವರನು ಕುರಿತು ಇಂತಂದನು
 
"ಹಾದಿಹೋಕರು ಎಲ್ಲ ಬೇಹುಗಾರರು ಎಂಬ
ಶಂಕೆಯಿಂದಲಿ ನಮ್ಮ ರಾಜ ಭಟರೆಲ್ಲ
ಪಥಿಕರಿಗೆ ಕಿರುಕುಳವ ಕೊಡುತಲಿರಬಹುದು
ಪಥಿಕ ಪಾಟನ ಕರ್ಮ ದೀಕ್ಷಿತರು ಅವರಹುದು
ಕಾಲದೂತರ ತರಹ ಕರುಣೆಯೇ ಇರದವರು
ಅವರಿಂದ ಪಾರಾಗಿ ಹೇಗೆ ಬಂದಿರಿ ತಾವು ?
 
M
 
160 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15