This page has not been fully proofread.

ದ್ವಿತೀಯ ಬದರಿಯಾತ್ರೆ; ರಜತಪೀಠಕ್ಕೆ ಮರಳಿದುದು
 
ಆನಂದ ತೀರ್ಥರದು ಅತಿ ಮಧುರ ಚರಿತೆ
ಹೃದಯ ವೈಶಾಲ್ಯತೆಗೆ ಪರಿಧಿಗಳೇ ಇಲ್ಲ
ಅವರು ನಡೆಸಿದ ಕಾರ್ಯ ಅತ್ಯಂತ ಶ್ರೇಷ್ಠ
ಅವರ ನುಡಿ, ವಚನಗಳು ಅತ್ಯಮೂಲ್ಯ
ಅವರ ಸಾಧನೆಯಹುದು ವಿಶ್ವವಿಸ್ಮಯಜನಿತ
ಎಂತಹ ಅದ್ಭುತ! ಎಂತಹ ಅಚ್ಚರಿ!
ಚೈತನ್ಯ ಜಗಕೆಲ್ಲ ಚೇತನವ ನೀಡುವ
ಪುಣ್ಯನದಿ, ತೀರ್ಥಗಳ ಹಲವಾರು ದಾಟಿ
ಸಹ್ಯಾದ್ರಿ ವಿಂಧ್ಯಾದ್ರಿ ಶಿಖರಗಳನೇರಿ
ಶ್ರೀ ವ್ಯಾಸದೇವರಿಗೆ ಅತ್ಯಂತ ಪ್ರಿಯವಾದ
ಬದರಿಕಾಶ್ರಮವನ್ನು ಮಧ್ವಮುನಿ ಸೇರಿದರು
ಉತ್ತಮೋತ್ತಮವಾದ ಸನ್ಯಾಸ ಪಡೆದಂತೆ
 
ಮಧ್ವ ಮುನಿ ರಚಿಸಿರುವ ಸೂತ್ರ ಭಾಷ್ಯವ ಕಂಡು
ಅತಿಯಾಗಿ ಮುದಗೊಂಡ ಶ್ರೀ ವ್ಯಾಸದೇವರು
ಈ ಹಿಂದೆ ತ್ರೇತೆಯಲ್ಲಿ ಹನುಮನಿಗೆ ನೀಡಿದ್ದ
ಸಹಭೋಗವೆಂಬುವ ಬ್ರಹ್ಮ ಪದವಿಯ ಕೊಟ್ಟು
ಆದರವ ತೋರಿದರು ಆನಂದ ತೀರ್ಥರಿಗೆ
ಬೇರಾರಿಗುಂಟು ಇಂತಹ ಪುಣ್ಯ?
 
ಇಂತು ಮತ್ತೊಮ್ಮೆ ಆ ಆನಂದ ತೀರ್ಥರು
ಬದರಿಕಾಶ್ರಮದಲ್ಲಿ ಕಾರ್ಯಗಳ ಪೂರೈಸಿ
ಗುರು ಸಾರ್ವಭೌಮರಿಗೆ ಮತ್ತೊಮ್ಮೆ ನಮಿಸುತ್ತ
ಅವರ ಆದೇಶವನು ಶಿರದಲ್ಲಿ ಧರಿಸುತ್ತ
ಪರಿವಾರ ಜನರೊಡನೆ ಮರಳಿದರು ಉಡುಪಿಗೆ
ಆನಂದದಿಂದವರು ಶ್ರೀ ಹರಿಗೆ ನಮಿಸಿದರು
 
52
 
53
 
54
 
55
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಒಂಭತ್ತನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
154 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ