This page has not been fully proofread.

ಇಪ್ಪತ್ತು ಮತ್ತೊಂದು ದುರ್ಭಾಗ್ಯವುಂಟು
ವೇದಗಳ ಸಹಜಾರ್ಥ ಇದರಿಂದ ಕಲುಷಿತವು
ಇಂಥ ದುರ್ಭಾಷ್ಯಗಳ ಖಂಡಿಸುವ ಸಲುವಾಗಿ
ಅಂದಿಗೂ ಇಂದಿಗು ಎಂದಿಗೂ ಇರಬಲ್ಲ
ಖಂಡನೆಗೆ ಲವಲೇಶ ಆವಕಾಶ ಇರದಂಥ
ಭಾಷ್ಯವನು ರಚಿಸಿದರು ಆನಂದ ತೀರ್ಥರು
 
ಶ್ರೀ ಸತ್ಯತೀರ್ಥರಿಂದ ಭಾಷ್ಯ ಲೇಖನ
 
ಮಂಗಳವ ನೀಡುವ ಗಂಗಾ ತರಂಗಗಳು
 
ಭೋರ್ಗರೆದು ಪ್ರವಹಿಸುವ ಪುಣ್ಯ ಪ್ರದೇಶದಲ್ಲಿ
ಅಪ್ರತಿಮ ಕಾಂತಿಯಲ್ಲಿ ಮೆರೆವ ಹರಿಮಂದಿರವ
ನಿರ್ಮಿಸುವ ರೂವಾರಿ ಎಂತಹ ಪೂತ ?
ಅಂತಹ ಶಿಲ್ಪಕ್ಕೆ ಸಮನಾದ ಭಾಷ್ಯಕ್ಕೆ
ಲೇಖನಿಯ ನೀಡಿದರು ಶ್ರೀ ಸತ್ಯತೀರ್ಥರು
 
ವಿದ್ವತ್ಸಭೆಗೆ ಆಗಮನ
 
ಬದರಿಕಾಶ್ರಮದಲ್ಲಿ ಆನಂದ ತೀರ್ಥರು
ಪರಮಾತ್ಮ ನರಹರಿಗೆ ಕೈಮುಗಿದು ನಿಂದು
ಆತನಾಣತಿಯನ್ನು ಪೂರೈಸಲೆಂದು
ನೂರಾರು ಶಿಷ್ಯರನು ಜೊತೆ ಮಾಡಿಕೊಂಡು
ಹಾದಿಯಲಿ ಹಲವಾರು ಕ್ಷೇತ್ರಗಳ ಕಂಡು
ಗೋದಾವರೀ ನದಿಯ ದಂಡೆಯನು ಸೇರಿದರು
 
ಗೋದಾವರೀ ನದಿಯ ತೀರದೊಳು ನೆರೆದಿದ್ದ
ವೇದಗಳ ಹದಿನೆಂಟು ಶಾಖೆಗಳ ಪರಿಣತರು
ಆನಂದ ತೀರ್ಥರನು ಪರಿಕಿಸುವ ಸಲುವಾಗಿ
 
ತೂರಿದರು ಪ್ರಶ್ನೆಗಳ ಸರಮಾಲೆಯನ್ನೇ
ಸಕಲ ವೇದದ ಸಾರ ವಿವರಿಸಿದ ಮಧ್ವಮುನಿ
 
ಖಂಡನೆಯ ಮಾಡಿದರು ಆರು ದರ್ಶನವ
 
144 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
1