This page has not been fully proofread.

ನಾರಾಯಣನಾ ನುಡಿಯು ಭೂಧರನ ಮುಖದಿಂದ
ಧರಣಿಯಲಿ ಹರಿಯುವಾ ಪುಣ್ಯನದಿಯಂತಾಯ್ತು
ಮಧ್ವಮುನಿಗಳ ಶ್ರೇಷ್ಠ ಪೃಥು ಬುದ್ಧಿ ವಾರಿಧಿಯು
ಚಂದ್ರಕಿರಣವ ಕಂಡು ಉಕ್ಕುವಾ ಕಡಲಾಯ್ತು
ಕಡಲೊಡಲು ನದಿಯನ್ನು ಸ್ವೀಕರಿಸುವಂತೆ
ಮಧ್ವಮಾನಸದಲ್ಲಿ ದೇವ ನುಡಿ ಹರಿಯಿತು
 
"ಸರ್ವಶ್ರೇಷ್ಠರು ನಮ್ಮ ವ್ಯಾಸ ನಾರಾಯಣರು
ಅವರು ನುಡಿದಿಹ ಮಾತು ಎಲ್ಲರಿಗೂ ಮಾನ್ಯ
ಇಂತೆಂದು ಚಿಂತಿಸುತ ಮಧ್ವಗುರುವರ್ಯರು
ಭಗವಂತನಾಣತಿಗೆ ಸಮ್ಮತಿಯನರುಹಿದರು
ಯಾರಿಗೂ ಸುಲಭದಲ್ಲಿ ಸಾಧ್ಯವಾಗದ ಮಾತ
ಶಿರದಲ್ಲಿ ಧರಿಸಿದರು ಅತಿಶಯದ ಭಕ್ತಿಯಲಿ
 
ತತ್ವವನು ಬೋಧಿಸುವ ಮೂರು ವೇದಗಳಂತೆ
ಪಾಪಗಳ ಪರಿಹರಿಪ ಮೂರು ಅಗ್ನಿಗಳಂತೆ
ಸಕಲವನು ಹೊತ್ತಿರುವ ಮೂರು ಲೋಕಗಳಂತೆ
ವ್ಯಾಸ, ನಾರಾಯಣರು, ಶ್ರೀ ಪೂರ್ಣಪ್ರಜ್ಞರು
ಭವ್ಯತೆಯ ಬೆಡಗಿಂದ ಕಂಗೊಳಿಸಿ ಮೆರೆದರು
 
ಆನಂದ ಪೂರ್ಣರು ಈ ಮೂರು ಮಹಿಮರು
 
52
 
138 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀ ಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಎಂಟನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.