This page has not been fully proofread.

"ವಿಧಿ, ವಾಯು, ಗರುಡರು, ರುದ್ರೇಂದ್ರ ದೇವಗಣ
 
ಈ ಸುರರ ಅನುಗರು ಗಂಧರ್ವ, ಅಸುರರು
 
ಎಲ್ಲರನೂ ಸೃಜಿಸುವನು ಲೀಲೆಯಿಂ ಭಗವಂತ
ಅನವರತ ಸೃಷ್ಟಿಸುತ, ಪರಿಪಾಲಿಸುತ್ತ
ಮತ್ತೆ ಇವರೆಲ್ಲರನೂ ಸಂಹಾರ ಮಾಡುತ್ತ
ಅವರವರ ಗತಿಯನ್ನು ಹೊಂದಿಸುವನೀತ
 
"ಅಗಣ್ಯ ಸದ್ಗುಣ ವಿದೂಷಣನು ಈತ
 
ಸಕಲ ದೋಷ ಎದೂರನಿವನು
 
ಎಲ್ಲವನು ಅಂಕೆಯಲ್ಲಿರಿಸಿಕೊಂಡಿರುವವನು
ಸ್ಮರಣೆ, ಸ್ತೋತ್ರಗಳಿಂದ ತನ್ನೆಲ್ಲ ಭಕುತರೂ
 
ಮುಕುತಿಯನು ಆರ್ಜಿಸಲು ಅನುಕೂಲವಾಗಲು
 
ಶ್ವೇಚ್ಛೆಯಿಂ ಧರಿಸಿಹನು ವಿವಿಧ ರೂಪಗಳ
 
ಮತ್ಸಾದಿ ಭಗವದ್ರೂಪ ವರ್ಣನೆ
 
ಹಿಂದೊಮ್ಮೆ ಮತ್ಸಾ ವತಾರವನ್ನು ಧರಿಸಿ
ವೇದಗಳ ಕದ್ದೊಯ್ದ ದೈತ್ಯನನು ವಧಿಸಿದನು
ಹಯಗ್ರೀವ ರೂಪದೊಳು ಮತ್ತೊಮ್ಮೆ ಹರಿಯು
ಮಧುವೆಂಬ ರಾಕ್ಷಸನ ಸಂಹರಿಸಿ ಕೊಂದನು
ನಾಲ್ಕು ವೇದಗಳನ್ನು ಈ ತರದಿ ಉದ್ಧರಿಸಿ
ನಾಗದ ಬ್ರಹ್ಮನಿಗೆ ಮತ್ತೊಮ್ಮೆ ನೀಡಿದನು
 
ಮತ್ತೊಮ್ಮೆ ಭಗವಂತ ಕೂರ್ಮ ರೂಪವ ತಾಳಿ
ದೇವ-ದೈತ್ಯರು ಕೂಡಿ ಮಥಿಸಿದಾ ಮಂದಿರವು
ಜಲಧಿಯಲಿ ಮುಳುಗುವುದ ತಡೆಹಿಡಿದು ನಿಲ್ಲಿಸಿದನು
ಸೂಕರನ ರೂಪವನು ತಳೆದು ಮತ್ತೊಮ್ಮೆ
 
ದೈತ್ಯನೊಬ್ಬನು ಎಳೆದು ನೀರಿನಲ್ಲಿ ಮುಳುಗಿಸಿದ
ಧರಣಿಯನು ಮೇಲೆತ್ತಿ ಸಂರಕ್ಷಿಸಿದನು
 
128 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15