This page has not been fully proofread.

ಇಂದ್ರಿಯವ ಜಯಿಸುವುದು ಅತಿ ಕಠಿಣವಹುದು
ನಿಷ್ಠುರದ ಜಪತಪವೇ ಇದಕ್ಕೆ ಸಾಧನವಹುದು
ಈ ವ್ರತವ ಸಾಧಿಸುತ ವನದಲಿಹನೆಂಬಂತೆ
ನಿರಪೇಕ್ಷ, ನಿರ್ಮಲದ ಆತ್ಮಸೌಖ್ಯದಿ ನಿರತ
ಬದರಿನಾರಾಯಣನನ್ನು ಮಧ್ವಮುನಿಗಳು ಕಂಡು
ಪರಮ ಸಂತೃಪ್ತಿಯಲ್ಲಿ ಆನಂದ ಪೊಂದಿದರು
 
ಸಂಪೂರ್ಣ ಅರಳಿರುವ ಕಮಲ ಪುಷ್ಪದ ತೆರದಿ
ಶೋಭಿಸುತ ಬೆಳಗುತಿಹ ತಮ್ಮೆರಡು ಕಂಗಳಿಂ
ಆನಂದ ತೀರ್ಥರು ಪರಮ ವಿಸ್ಮಯದಿಂದ
ಧರ್ಮಬಾಹಿರ ಕರ್ಮ ಕಂಡು ಮುನಿಸಾಗುವ
ಯಮಧರ್ಮ ಪುತ್ರನಾ ನಾರಾಯಣನ ಕಂಡು
ಮನದೊಳಗೆ ಇಂತೆಂದು ಸ್ಮರಿಸತೊಡಗಿದರು
 
ಶ್ರೀ ನಾರಾಯಣ ವರ್ಣನ
 
"ಸರ್ವರೊಳು ಉತ್ತಮನು, ಸರ್ವಗುಣ ಸಂಪನ್ನ
ಹಗಲಿರುಳು ಶ್ರೀ ಲಕುಮಿ ಸಂಗದಲ್ಲಿರುವವನು
ನಾಗದ ಬ್ರಹ್ಮನೇ ಮೊದಲಾದ ದೇವಗಣ
ಕೂಡಿರುವ ಹದಿನಾಲ್ಕು ಲೋಕವನ್ನೆಲ್ಲ
ಪ್ರಳಯವೈದಿಸುವನಿವನು ಇತಿಹಾಸ ಪುರುಷ
ಸರ್ವದೇವೋತ್ತಮನು ನಾರಾಯಣ
 
"ಪ್ರಕೃತಿ ಎಂಬುದು ಒಂದು ಮಿಗಿಲಾದ ತತ್ವ
ಸತ್ವ, ರಜ, ತಮಸೆಂಬ ತ್ರಿಗುಣಗಳು ಕೂಡಿಹವು
ಅದಕಿಂತ ಮಿಗಿಲಾದ್ದು ಮಹತ್ತತ್ವವಿಹುದು
ಇದರಿಂದ ಮೂರು ವಿಧ ಅಹಂಕಾರ ತತ್ವವನೂ
ಪಂಚಭೂತಗಳನ್ನೂ, ಬ್ರಹ್ಮಾಂಡವನ್ನೂ
ಸೃಜಿಸಿಹನು, ಭಗವಂತ, ನಾರಾಯಣ
 
ಎಂಟನೆಯ ಸರ್ಗ / 127
 
8
 
10
 
11