This page has not been fully proofread.

ಶ್ರೀ ಗುರುಭೋ ನಮಃ
 
ಎಂಟನೆಯ ಸರ್ಗ
 
ಶ್ರೀ ವೇದವ್ಯಾಸರ ಬಳಿ ಶ್ರೀ ಮಧ್ವಾಚಾರ್ಯರ ಶಿಷ್ಯವೃತ್ತಿ
 
0
 
ಬದರಿಕಾಶ್ರಮದಲ್ಲಿ ಆನಂದ ತೀರ್ಥರು
ಸುಜ್ಞಾನ, ನಯವಿನಯ ತೇಜಸ್ಸು ಮುಂತಾದ
ಹಲವಾರು ಅಪ್ರತಿಮ ಸದ್ಗುಣಗಳಿಂದ
ವಿಪ್ರವೃಂದದ ಸ್ನೇಹ ಸಂಪಾದಿಸಿರಲು
ವೇದನಾಯಕರಾದ ವ್ಯಾಸ ಮುನಿವರ್ಯರನು
ಏಕಾಂತದಲ್ಲೊಮ್ಮೆ ಸಂಧಿಸಿದರು
 
"ಶ್ರೀ ಹರಿಯ ಮಹಿಮೆಗಳು ಸುವಿಶೇಷವಾದವು
ರುದ್ರಾದಿ ದೇವರಿಗೂ ತಿಳಿಯದಂತಹವು
ಇವುಗಳನ್ನು ಅರಿಯಲು ವಾಯುದೇವರೇ ಅರ್ಹ
ವ್ಯಾಸಮುನಿ ಮಧ್ವರ ಗುರು ಶಿಷ್ಯ ಸಂಬಂಧ
ಅತ್ಯಂತ ಉಚಿತ, ಅತ್ಯಂತ ಯೋಗ್ಯವು"
ಇಂತೆಂದು ಸ್ತುತಿಸಿದರು ದೇವತೆಗಳು
 
ದ್ವಾರಕಾನಗರಿಯು ಸಕಲ ಐಸಿರಿ ಭೂಮಿ
ಶ್ರೀ ಕೃಷ್ಣ ಪರಮಾತ್ಮ ಆ ನಗರಿಯನ್ನು
ಮತ್ತಷ್ಟು ಸಿರಿಯಿಂದ ಸಮೃದ್ಧಗೊಳಿಸಿದನು
ಅಂತೆಯೇ ಈ ನಮ್ಮ ವಾಸಿಷ್ಠ-ಕೃಷ್ಣರು
ಜ್ಞಾನದೈಸಿರಿಯಿಂದ ಸಮೃದ್ಧಗೊಂಡಿದ್ದ
ಮಧ್ವರಿಗೆ ಜ್ಞಾನವನು ಮತ್ತಷ್ಟು ತುಂಬಿದರು
 
1
 
2
 
3