This page has not been fully proofread.

ಶ್ರೀ ವೇದವ್ಯಾಸ ವರ್ಣನ
 
ಶ್ರೀ ಹರಿಯ ಮತ್ತೊಂದು ಪ್ರಾಕೃತದ ರೂಪದಲಿ
ಮೂರ್ಲೋಕ ಮಂಡಲಕೆ ಲೋಕಭೂಷಣರಾಗಿ
ಸತ್ಯವತೀ ಸುತನಾಗಿ, ಇಳೆಯಲ್ಲಿ ಅವತರಿಸಿ
ಬದರಿಕಾಶ್ರಮದಲ್ಲಿ ಮುನಿನಿವಹ ಮಧ್ಯದಲಿ
ಕಂಗೊಳಿಸಿ ಮೆರೆದಿದ್ದ ವ್ಯಾಸಮುನಿವರ್ಯರನೂ
ಪರಿಪೂರ್ಣ ಪ್ರಮತಿ, ಆ ಮಧ್ವಮುನಿ ಕಂಡರು
 
ಪರಿಶುದ್ಧ ಚಿತ್ರವನು ಪೊಂದಿಹರು ಮಧ್ವರು
ತಮ್ಮ ಹೃತ್ಕಮಲದಲಿ ಆಚಾರ್ಯವರ್ಯರು
ಸರ್ವದಾ ಕಾಣುವರು ವ್ಯಾಸಮುನಿಗಳನ್ನು
ಆ ಸುರೋತ್ತಮರನ್ನು ಅಡಿಗಡಿಗೆ ಕಾಣುತ್ತ
ನಿತ್ಯ ನೂತನವೆಂದು ದರುಶನವ ಎಣಿಸುತ್ತ
ಅಚ್ಚರಿಯಲಿಂತೆಂದು ಆಲೋಚಿಸಿದರು
 
"
 
* ಅಗಣ್ಯ ಗುಣಗಳಿಗೆ ಸಾಗರರು ಇವರು
ಪರಬೊಮ್ಮನಾಣತಿಗೆ ಅನುಸಾರವಾಗಿ
ಮುನಿ ಪರಾಶರರಿಂದ ಸತ್ಯವತಿ ಗರ್ಭದಲ್ಲಿ
ಜನಿಸಿ ಬಂದಿಹರಿವರು ಶ್ರೀ ವೇದವ್ಯಾಸರು
 
ಅಕಳಂಕ ವಾರಿಧಿಯು ಸರ್ವಗುಣ ನಿಧಿಯು
 
ಇವರೀಗ ಸಾಕ್ಷಾತ್ತು ಶ್ರೀ ಹರಿಯೇ ಅಲ್ಲವೆ ?''
 
"ಕಾರುಣ್ಯ ವೆಂಬೊಂದು ಮಂದರಾದ್ರಿಯು ಕಡೆದ
ಸಜ್ಜನರ ಮನಸೆಂಬ ಪಾಲ್ಗಡಲಿನಲ್ಲಿ
ಶೃತಿರೂಪ ಶ್ರೀ ಹರಿಯ ಹೃತ್ಕಮಲವಾಸಿನಿ
ಪರಮ ಲಾವಣ್ಯವತಿ, ಪರಮ ಸೌಂದರ್ಯವತಿ
ಸಕಲ ಸಿರಿದಾಯಿನಿ ಶ್ರೀ ರಮಾ ದೇವಿಯು
ಪ್ರಕಟಗೊಂಡಳು ದಿವ್ಯ ಸುಮುಹೂರ್ತದಲ್ಲಿ
 
ಏಳನೆಯ ಸರ್ಗ / 111
 
16
 
17
 
18
 
19