This page has not been fully proofread.

ವೃಷಭರಾಜನ ತೆರದಿ ಬಾಹುಬಲ ಸಿರಿಯು
ಅರಳಿದ ಕಣ್ಣುಗಳು ; ಭಯವನರಿಯದ ಧೀರ
ಇಂಥ ಜೀವೋತ್ತಮರು, ಆನಂದ ತೀರ್ಥರು
ವ್ಯಾಘ್ರ ಕೇಸರಿಯಂಥ ಪ್ರಾಣಿಗಳ ಬೀಡಾದ
ಖಗ, ಸರ್ಪ, ವಿಷಜಂತುಗಳಿಗೆಲ್ಲ ನೆಲೆಯಾದ
ಹಿಮಗಿರಿಯ ಕಂಡರು, ಆನಂದ ತೀರ್ಥರು
 
ಹಿಮಗಿರಿಯ ನೋಡುತ್ತ ಆನಂದ ಹೊಂದುತ್ತ
ಆ ಸಿರಿಯ ಕರಗಳಿಂದಪ್ಪುಗೆಯ ಪಡೆದವನ
ಸಜ್ಜನರ ಹಿತಕಾಗಿ ಶೇಷಶಯ್ಕೆಯೊಳಿರುವ
ಉಲ್ಲಸಿತ ಮನಸಿನ ದೇವವೃಂದದ ನಡುವೆ
ರತ್ನಮಯ ಪೀಠದ ಮಧ್ಯದಲ್ಲಿ ಶೋಭಿಸುವ
ರಮಣೀಯ ಮೂರ್ತಿಯನು ಮನದಲ್ಲಿ ಸ್ಮರಿಸಿದರು
 
ಅಡಿಗಡಿಗೆ ಅಡಿಗಳಿಗೆ ನಮಿಸುವ ಯತಿಗಡಣ
 
ಚಿನ್ನದಂದದಿ ಹೊಳೆವ ಪೀತವರ್ಣ ದುಕೂಲ
ವಿವಿಧ ರತ್ನಾಭರಣ, ಹೊನ್ನ ಕಡಗಗಳು
 
ಕಂಗೊಳಿಪ ವನಮಾಲೆ ರಮಣೀಯ ಕಾಂತಿ
 
ಆನಂದ ಮುಂತಾದ ಸದ್ಗುಣವೇ ದೇಹ
ಇಂಥ ಶ್ರೀ ಹರಿಯನ್ನು ಸ್ಮರಿಸಿ ಕೊಂಡಾಡಿದರು
 
55
 
ಆರನೆಯ ಸರ್ಗ / 103
 
56
 
57
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಆರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.