This page has not been fully proofread.

ಈ ಒಂದು ಪ್ರಕರಣದ ಪ್ರಭಾವ ಬಲದಿಂದ
ಆಚಾರ್ಯ ಮಧ್ವರ ಪೂರ್ಣ ಸುಜ್ಞಾನವನ್ನು
ಅರಿತರಾ ಪಂಡಿತರು ಸುಸ್ಪಷ್ಟವಾಗಿ
ರುದ್ರಾದಿ ದೇವಗಣ ಆದರದಿ ವಂದಿಸುವ
ಆನಂದ ತೀರ್ಥರಿಗೆ ಸಾಷ್ಟಾಂಗ ನಮಿಸುತ್ತ
ಧನ್ಯತಾ ಭಾವದಲಿ ಸಾರ್ಥಕ್ಯ ಪಡೆದರು
 
ಅಪಾಲಾ ಶಬ್ದದ ಅಪೂರ್ವಾರ್ಥ
 
ಇಂತಿರಲು ಮತ್ತೊಂದು ಪಂಡಿತರ ಸಭೆಯಲ್ಲಿ
ಆ ಸುರೇಂದ್ರನು ಒಮ್ಮೆ ಕನ್ಯಯೋರ್ವಳ ಮೆಚ್ಚಿ
ಕಾಂತಿಯುತ ದೇಹವನ್ನು ಕರುಣಿಸಿದ ಕಥೆಯನ್ನು
ಬಣ್ಣಿಸುವ ಸೂಕ್ತವನು ವಿವರಿಸುತ ಗುರುಗಳು
"ಅಪಾಲಾ" ಎಂಬುದಕೆ ಅತಿ ತರುಣಿ" ಎಂದರ್ಥ
ಎಂದು ಹೇಳಿದರಲ್ಲಿ ಆಚಾರ್ಯ ಮಧ್ವರು
 
"ಅಪಾಲಾ" ಪದದರ್ಥ "ತ್ರಿಣೀ' ಎನ್ನುತ್ತ
ಅಲ್ಲಿದ್ದ ಪಂಡಿತರು ಆಕ್ಷೇಪವೆತ್ತಿದರು
ತೃಣ ಮಾತ್ರ ಜಗ್ಗದೆ ಆನಂದ ತೀರ್ಥರು
"ಶೀಘ್ರದಲಿ ಬರಲಿಹನು ಪಂಡಿತನು ಒಬ್ಬ
ನೀಗುವನು ನಿಮ್ಮ ಈ ಸಂಶಯವನವನು"
ಎನ್ನುತ್ತ ಅವರು, ಮುಂದಕ್ಕೆ ತೆರಳಿದರು
 
ಅತಿ ಶೀಘ್ರದಲ್ಲಿಯೇ ಬಂದನಾ ವಿದ್ವಾಂಸ
ಆನಂದ ತೀರ್ಥರಾ ನುಡಿಗೆ ಅನುಗುಣವಾಗಿ
ಎಲ್ಲ ಲಕ್ಷಣವನ್ನೂ ಹೊಂದಿದ್ದನಾತ
ಅವನನ್ನು ಬರಮಾಡಿ ಪೀಠದಲ್ಲಿ ಕುಳ್ಳಿರಿಸಿ
"ಅಪಾಲಾ " ಎಂಬುದಕ್ಕೆ ಅರ್ಥವನ್ನು ಕೇಳಲು
"ಅತಿ ತರುಣಿ" ಎಂದೇ ಆತನೂ ನುಡಿದನು
 
ಆರನಯ ಸರ್ಗ / 93
 
16
 
17
 
18
 
19