This page has not been fully proofread.

"ಇಂದು ಈ ಸಭೆಯಲ್ಲಿ ಮಂಡಿಸಿಹ ಮಧ್ವರು
ಅಪ್ರತಿಮ ಪಾಂಡಿತ್ಯ, ಸುಜ್ಞಾನ ವುಳ್ಳವರು
ತರ್ಕ, ಮೀಮಾಂಸೆಯಲಿ ವೇದಾದಿ ವಿದ್ಯೆಯಲಿ
ನಿಪುಣರಾಗಿಹರನ್ನು ಖಂಡಿಸಿದ ಖ್ಯಾತರು
ಅಂಥ ಸುಜ್ಞಾನಿಗೆ ಸರಿಸಾಟಿಯೆ ನಾವು ?"
 
ಒಳಗೊಳಗೆ ತೊಳಲಿದರು ಕೇರಳದ ಪಂಡಿತರು
 
ಇಂತೆಂದು ಚಿಂತಿಸಿದ ದ್ವಿಜವರ್ಯರೆಲ್ಲ
ಅನ್ಯದೇಶದ ಒಬ್ಬ ಪಂಡಿತನ ಮುಂದಿರಿಸಿ
ಆಚಾರ್ಯರೊಂದಿಗೆ ಸೆಣಸಲೆಳಸಿದರು
"ಸತ್ಪಾತ್ರ ದಾನವನು ನೀಡುವನ ಹೊಗಳುವ
ವೇದ ಸೂಕ್ತದ ಅರ್ಥ ವಿವರಿಸಿರಿ ಎಂದು
ಆಚಾರ್ಯ ಮಧ್ವರಲಿ ಮನವಿ ಮಾಡಿದರು
 
ದಾನಸೂಕ್ತದ ಮಂತ್ರ ವಿವರಿಸುತ ಮಧ್ವರು
"ಪೃಣೀಯಾತ್' ಶಬ್ದಕ್ಕೆ ಪ್ಪಣ್ ಮೂಲವೆಂದರು
ಮಧ್ವ ಅಪಜಯವನ್ನೇ ಆಶಿಸಿದ ಪಂಡಿತ
ಈಗೊಂದು ಅವಕಾಶ ಲಭಿಸಿತೆಂದ
 
ಮಧ್ವರ ಮಾತಿನಲಿ ಹುರುಳಿಲ್ಲವೆಂದಂದು
"ಪೃಣೀಯಾತ್" ಶಬ್ದಕ್ಕೆ "ಪ್ರೀಜ್" ಧಾತು ಸರಿಯೆಂದ
 
ಮರುಗಿದರು ಮಧ್ಯರು ಪಂಡಿತನ ಮೌಡ್ಯಕ್ಕೆ
"ಪ್ರ" ಧಾತುಗಳ ಭೇದವೇ ಗೊತ್ತಿಲ್ಲ
ವ್ಯಾಕರಣ ಪ್ರಾಥಮಿಕ ಶಿಕ್ಷಣವೇ ನಿನಗಿಲ್ಲ
ಮೂಢ ! ಅಕ್ಷರವ ಬರೆಬರೆದು ಅಭ್ಯಾಸ ಮಾಡಿಕೊ"
ಇಂತೆಂದು ಗದರಿಸುತ ಆನಂದ ತೀರ್ಥರು
 
ಮತ್ಸರಾಕುಲಿತರನು ಅಪಹಾಸ್ಯ ಮಾಡಿದರು
 
92 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15