This page has not been fully proofread.

ತಿರುವನಂತಪುರದಲ್ಲಿ
 
ಯಾತ್ರೆಯನ್ನು ಮುಂದರಿಸಿ ಆನಂದ ತೀರ್ಥರು
ಅನಂತಶಯನ ವೆಂಬೊಂದು ಊರ ಸೇರಿದರು
 
ಪದ್ಮನಾಭನು ಊರ ದೇವರಾಗಿಹನಿಲ್ಲಿ
ಆ ಶೇಷಶಯನನಿಗೆ, ಶ್ರೀ ಲಕುಮಿ ಒಡೆಯನಿಗೆ
ಸೌಂದರ್ಯ ಕಾಂತಿಯಲ್ಲಿ ಪ್ರಜ್ವಲಿಪ ದೇವನಿಗೆ
ಭಕುತಿಯಲಿ ನಮಿಸಿದರು ಆನಂದ ತೀರ್ಥರು
 
ಆನಂದ ತೀರ್ಥರದು ಅಪ್ರತಿಮ ಪ್ರತಿಭೆ
ವೇದಾಂತ ಸೂತ್ರಗಳ ಉತ್ತಮೋತ್ತಮ ಜ್ಞಾನ
 
ಶಾಸ್ತ್ರಾರ್ಥ ಬೋಧಿಸುತ ಶಿಷ್ಯಗಣಕೆಲ್ಲ
"ಜೀವಗಣಗಳಿಗಿಂತ ಭಿನ್ನ ಪರಮಾತ್ಮ
 
'' ನೆಂದು ಅಡಿಗಡಿಗೆ ಹೇಳುತ್ತ
 
ಬ್ರಹ್ಮನಚ್ಯುತ ''
ಬ್ರಹ್ಮಸೂತ್ರಗಳರ್ಥ ವಿವರದಲ್ಲಿ ನುಡಿದರು
 
ಕುದಿಪುರನ ದುಷ್ಟತನ
 
ಶ್ರೀ ಮುಖ್ಯಪ್ರಾಣನಲಿ ಹಗೆಯ ಸಾಧಿಸಲೆಂದೇ
"ಕುದಿಪುರೆಂಬ' ವಂಶದಲ್ಲಿ ಜನಿಸಿದ್ದ
"ಸಂಕರ'ನು ಮತ್ಸರದಿ ಇಂತು ಉಸುರಿದನು
"ಬಹು ದೊಡ್ಡ ಅಪಚಾರವೆಸಗಲಾಗಿದೆ ಇಂದು
ಯಾವ ಸೂತ್ರಕ್ಕೂ ಭಾಷ್ಯವನೆ ಬರೆಯದಿಹ
ಮಹನೀಯರೊಬ್ಬರು ಶಾಸ್ತ್ರಾರ್ಥ ಬೋಧನೆ ಮಾಡುತಿಹರು "
 
"ನಾವು ಹೇಳಿದ ಅರ್ಥಾಕ್ಷೇಪವುಂಟೆ ?
ಅಂತಾದರೆ ಅದನ್ನು ಶೃತಪಡಿಸಿ ಈಗಲೇ
ಬ್ರಹ್ಮಸೂತ್ರಕೆ ಭಾಷ್ಯ ನಾವೂ ಬರೆಯಲಿಹೆವು
 
ಬರೆಯಬಾರದು ಎಂಬ ದಂಡಸಂಹಿತೆ ಇದೆಯೆ ?"
 
ಆನಂದ ತೀರ್ಥರ ಮಂದಹಾಸದ ನುಡಿಗೆ
ಅಭಿನಂದಿಸಿದರಲ್ಲಿ ನೆರೆದಿದ್ದ ಮಂದಿ
 
82 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39