This page does not need to be proofread.

ವ್ಯಾಖ್ಯಾನವಿದು. ಇದರಲ್ಲಿರುವ ವಿಷಯಗಳೆಲ್ಲ ಅನ್ವಯಾರ್ಥವಿವೃತ್ತಿಯಲ್ಲಿದ್ದು ದೇ

ಹೊರತು ಹೊಸದೇನಿಲ್ಲ, ಇದಕ್ಕೆ ಇನ್ನೂ ಅನೇಕ ಅರ್ಥಗಳು ಇರಲು ಸಾದ್ಯ,

ಆದರೆ ಸಾಮಾನ್ಯ ಜನರ ತಿಳಿವಿಗೆ ಎಟಕುವಂತೆ ತಿಳಿಯಾದ ಭಾವಾರ್ಥ ಮತ್ತು

ಪ್ರತಿಪದಾರ್ಥ ಬರೆದಿದ್ದೇನೆ. ಇದರಲ್ಲಿ ದೋಷಗಳಿದ್ದರೆ ಕ್ಷಮಿಸಿ, ಗುಣಗಳಿದ್ದರೆ

ಗುರುಗಳದೆಂದು ತಿಳಿಯುವುದು. ಇದಕ್ಕೆ ಆಶೀರ್ವಚನದ ತಿಲಕವಿಟ್ಟು ಹರಸಿದ

ವರು, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು.

ಪ್ರಕಾಶನದ ಹೊಣೆ ಹೊತ್ತವರು, ಸುಗುಣ ಪ್ರಕಾಶನದವರು. ಸಕಾಲದಲ್ಲಿ ಅಚ್ಚು

ಕಟ್ಟಾಗಿ ಮುದ್ರಿಸಿದವರು, ಸುಗುಣ ಪ್ರಿಂಟರ್, ಉಡುಪಿ, ಇವರು, ಇವರೆಲ್ಲರಿಗೂ

ನನ್ನ ಕೃತಜ್ಞತೆಗಳು. ಈ ವ್ಯಾಖ್ಯಾನದಿಂದ ಪಠಿಸುವವರಿಗೆ ಏನಾದರೂ ಪ್ರಯೋಜನ

ವಾದರೆ ನನ್ನ ಶ್ರಮ ಸಾರ್ಥಕ. ಅವರಿಗೆ ಶ್ರೀವಾದಿರಾಜರ ಅನುಗ್ರಹವಾಗಲಿ ಎಂದು

ಶ್ರೀಕೃಷ್ಣನಲ್ಲಿ ನನ್ನ ಪ್ರಾರ್ಥನೆ.
 

 
ಉಡುಪಿ,
 

 
1-7-1993
 

 
(iv)
 

 
ಎಂ. ರಾಜಗೋಪಾಲಾಚಾರ್ಯ