This page has been fully proofread once and needs a second look.

ಆಶೀರ್ವಚನ
 

 
ಆಚಾರ್ಯ ಮಧ್ವರ ಪಾದಧೂಳಿಯಿಂದ ಪಾವನವಾದ ಪುಣ್ಯಕ್ಷೇತ್ರ ಉಡುಪಿ.

ಆಚಾರ್ಯ ಮಧ್ವರು ಅಧ್ಯಾತ್ಮಪ್ರಪಂಚದಲ್ಲಿ
ದೈತಸಿದ್ಧಾಂತವನ್ನು ಸ್ಥಾಪಿಸಿ, ಅದರ ಪ್ರಸಾರಕ್ಕಾಗಿ
 
ದಿಗ್ವಿಜಯವನ್ನು ಕೈಗೊಂಡು
 
ದೈತಸಿದ್ಧಾಂತವನ್ನು ಸ್ಥಾಪಿಸಿ,
ಭಾರತದ ಉದ್ದಗಲಕ್ಕೂ
 
ಕರ್ತರೂ ಆಗಿದ್ದರು;
 
ಸಂಚರಿಸಿದ ಮಹನೀಯರು. ಉಡುಪಿಯ ಇತಿಹಾಸದ ಹೊಸ ಅಧ್ಯಾಯವು ಇವ

ರಿಂದ ಪ್ರಾರಂಭವಾಯಿತು. ಇವರ ಬಳಿಕ ಉಡುಪಿಯ ಇತಿಹಾಸಕ್ಕೆ ಹೊಸ ತಿರು

ವನ್ನು ನೀಡಿದವರು, ಮಾಧ್ವ ಪೀಠದ ಪರಂಪರೆಯಲ್ಲಿ ಬಂದ ಶ್ರೀ ವಾದಿರಾಜ

ಶ್ರೀಮಚ್ಚರಣರು. ಇವರು ಸಕಲ ಶಾಸ್ತ್ರಪಾರಂಗತರೂ ಕವಿವರ್ಯರೂ, ಗ್ರಂಥ

ಕರ್ತರೂ ಆಗಿದ್ದರು;
ಸಿದ್ಧಮಂತ್ರರಾದ ಅಪರೋಕ್ಷಜ್ಞಾನಿಗಳೂ ಸಹ. ಇವರ

ಗ್ರಂಥಗಳು ಸಂಸ್ಕೃತದಲ್ಲಿ ವಿಪುಲವಾಗಿವೆ, ಇವರು ಬರೇ ತತ್ವಜ್ಞಾನಿಗಳಾಗಿರದೆ

ಸಮಾಜಸುಧಾರಕರೂ ಆಗಿದ್ದರು. ವ್ಯಾಸಕೂಟದಲ್ಲಿ ಹೇಗೋ ಹಾಗೆ ದಾಸಕೂಟ

ದಲ್ಲೂ ಇವರು ಅಗ್ರಮಾನ್ಯರಾಗಿದ್ದರು. ಕನಕ, ಪುರಂದರ ಮೊದಲಾದ ಅನೇಕ

ಮಂದಿ ದಾಸವರೇಣ್ಯರು ಇವರ ಕಾಲದಲ್ಲಿ ಉಡುಪಿಯ ಕೃಷ್ಣನ ದರ್ಶನ ಮಾಡಿದ

ದಾಖಲೆಗಳಿವೆ. ಕನ್ನಡ ಮತ್ತು ತುಳು ಭಾಷೆಗಳಲ್ಲೂ ಸಾಮಾನ್ಯ ಜನರಿಗೆ ತತ್ವ

ಜ್ಞಾನ ತಿಳಿಯುವ ಹಾಗೆ ವಾದಿರಾಜರು ಹಾಡುಗಳನ್ನು ಬರೆದಿದ್ದರು. ಇವರ ಹಾಡು

ಗಳು ಇಂದಿಗೂ ಪ್ರಸ್ತುತವಾಗಿ ಬಹಳ ಜನಪ್ರಿಯವಾಗಿವೆ. ಸಂಗೀತ ಕಚೇರಿ

ಗಳಲ್ಲೂ, ಹರಿಕತೆ ಮತ್ತು ಭಜನೆ ಗೋಷ್ಠಿಗಳಲ್ಲೂ 'ಹಯವದನ' ಅಂಕಿತದ ಇವರ

ಹಾಡುಗಳನ್ನು ಯಾರೂ ಕೇಳಬಹುದು.
 
ಆಗಿದೆ.
 

 
ವಾದಿರಾಜ ಸ್ವಾಮಿಗಳ ಸ್ತೋತ್ರ ಸಾಹಿತ್ಯವು ವಿಪುಲವೂ ವೈವಿಧ್ಯಮಯವೂ
ಆಗಿದೆ. ಪೂಜಾಕಾಲದಲ್ಲಿ ಇಂದಿಗೂ ಜನರು ಭಕ್ತಿಯಿಂದ ಆ ಸ್ತೋತ್ರಗಳನ್ನು

ಮತ್ತು ಹಾಡುಗಳನ್ನು ಹಾಡುವುದಿದೆ. ಬರೇ ಹಾಡುಗಳಿಂದಲೇ ಷೋಡಶೋಪಚಾರ
ಪೂಜೆಯನ್ನು ಮಾಡುವಂತಹ ವಿವಿಧ ರಚನೆಗಳೂ ಇವೆ. ಆವಾಹನ, ಆಸನ
ಅಭಿಷೇಕ, ಧೂಪ, ದೀಪ, ನೈವೇದ್ಯ, ಫಲಾಹಾರ, ಮಂಗಳಾರತಿ, ಶಯನೋತ್ಸವ,
ಹೀಗೆ ಸಾಂದರ್ಭಿಕ ಮಹತ್ವವುಳ್ಳ ಅನೇಕ ಹಾಡುಗಳು ಇವೆ.
ಈ ದಶಾವತಾರ ಸ್ತುತಿಯೂ ಅವುಗಳಲ್ಲಿ ಒಂದು. ಇದು ಆಕೃತಿ ಛಂದಸ್ಸಿನ ಅಶ್ವಧಾಟೀ ವೃತ್ತದಲ್ಲಿದೆ.
ಇದರಲ್ಲಿ ನಾಲ್ಕು ಪಾದಗಳು, ಪ್ರತಿ ಪಾದದಲ್ಲೂ ೨೨ ಅಕ್ಷರಗಳಿವೆ. ಯಥಾಸ್ಥಿತ
ವಾದ ಗುರುಲಘುಗಳುಳ್ಳ ಅಕ್ಷರವೃತ್ತವಾದರೂ ಇದರಲ್ಲಿ ಪಂಚಮಾತ್ರಾಗಣದ ಖಂಡ

ನಡೆ ಇರುವುದರಿಂದ ಇದು ಉಭಯ ಛಂದಸ್ಸು, ಛಂದಃಸಾರದಲ್ಲಿ ಇದರ ಲಕ್ಷಣ
 
ಈ ದಶಾವತಾರ
 
(1)