This page has not been fully proofread.

ಓಂ ಬುದ್ಧಾಯ ನಮಃ, ಓಂ ಕಲ್ಕಿನೇ ನಮಃ
 
ಪ್ರಣಯನ ।
 
ಬುದ್ದಾ ರಾವತಾರ ಕವಿಬದ್ಧಾನುಕಂಪ ಕುರು ಬದ್ಧಾಂಜಲ್ ಮಯಿ ದಯಾಂ
ಶೌದೊದನಿ ಪ್ರಮುಖ ಸೈದ್ಧಾಂತಿಕಾsಸುಗಮ ಬೌದ್ದಾಗ
ಕುದ್ಧಾಹಿತಾಸುಹೃತಿ ಸಿದ್ಧಾಸಿಪೇಟಧರ, ಶುದ್ಧಾಶ್ವಯಾನ ಕಮಲಾ-
ಶುದ್ಧಾಂತ ಮಾಂ ರುಚಿಪಿನದ್ದಾಖಿಲಾಂಗ ನಿಜಮದಾನ ಕಲ್ಯಭಿಧ
 

 
ಭೋಃ ॥ ೩೨ ॥
 
ತಾ:
 
ದುರ್ಕ್ಷೇಯವಾದ ಬೌದ್ಧ ಸಿದ್ಧಾಂತವನ್ನು ಶೌದ್ಧೋದನಿ ಮೊದಲಾದವ
ರಿಂದ ಪ್ರಚಾರ ಮಾಡಿಸಿದವನೆ, ಜ್ಞಾನಿಗಳಲ್ಲಿ ದಯೆದೋರುವ ಅಹಿಂಸಾತತ್ವದ ಪ್ರತಿ
ಪಾದಕನಾದ ಬುದ್ಧನಾಗಿ ಧರೆಗಿಳಿದ ಪರಮಾತ್ಮನೆ, ಕೈಮುಗಿಯುತ್ತೇನೆ, ನನ್ನಲ್ಲಿ
ದಯೆದೋರು,
ಕ್ರೋಧಾವೇಶಭರಿತರಾದ ದುರ್ಜನರ (ಅಹಿತರ) ವಿನಾಶಕ್ಕಾಗಿ ಖಡ್ಗ
ಗುರಾಣಿಗಳನ್ನು ಧರಿಸಿ ಸನ್ನದ್ಧನಾಗಿ, ಬಿಳಿ ಕುದುರೆಯೇರಿ, ಹೊಳೆವ ಅಂಗಕಾಂತಿ
ಯಿಂದ ಬೆಳಗುತ್ತಾ ಬರುವ ಲಕ್ಷ್ಮೀ ಮನೋಹರನಾದ ಶ್ರೀಹರಿ, ನಿನ್ನವನಾದ
ನನ್ನನ್ನು ರಕ್ಷಿಸು.
 
ಪ್ರ. ಪ:
 
-
 
ಶೌದ್ಧೋದನಿ ಪ್ರಮುಖ = ಶುದ್ಧೋದನ ಮಗನೇ ಮೊದಲಾದ
(ಶುದ್ಧ + ಓದನ ಸೃಹೋದರಾದಿತ್ಯಾತ ಸಾಧುಃ) ಸೈದ್ಧಾಂತಿಃ = ಸಿದ್ಧಾಂತ
ಪ್ರಚಾರಕರಿಂದ, ಅಸುಗಮ ದುರ್ಜ್ಞೆಯವಾದ, ಬೌದ್ಧಾಗಮಪ್ರಣಯನ ಬೌದ್ಧ
ಸಿದ್ಧಾಂತವನ್ನು ನಿರ್ಮಿಸಿ ಪ್ರಸಾರಮಾಡಿದವನೆ! ಕವಿ =ಜ್ಞಾನಿಗಳಲ್ಲಿ, ಬಾನು
ಕಂಪ = ದಯೆಯುಳ್ಳ,
ಬುದ್ಧಾವತಾರ = ಬುದ್ಧರೂಪನಾಗಿ ಅವತರಿಸಿದವನೆ,
ಬದ್ಧಾಂಜಲ್ -ಕೈಮುಗಿದ, ಮಯಿ ನನ್ನಲ್ಲಿ, ದಯಾಂ ಕೃಪೆಯನ್ನು, ಕುರು
ಮಾಡು. ಕುದ್ಧಾಹಿತ = ಕ್ರೋಧಗೊಂಡ ಅಹಿತಜನರ, ಅಸುಹೃತಿ = ಪ್ರಾಣಾಪ
ಹಾರಕ್ಕಾಗಿ, ಸಿದ್ಧಾಸಿಖೇಟಧರ =ಖಡ್ಗ ಗುರಾಣಿಗಳನ್ನು ಧರಿಸಿ ಸನ್ನದ್ಧನಾದವನೆ,
ಶುದ್ಧಾಶ್ವಯಾನ =ಬಿಳಿ ಕುದುರೆಯನ್ನೇರಿ ಕುಳಿತ, ಕಮಲಾ ಶುದ್ಧಾಂತ = ಲಕ್ಷ್ಮಿ ಯೆ
ಅಂತಃಪುರ (ಪತ್ನಿ) ವಾಗಿರುವ, ರುಚಿಪಿನದ್ಧಾಖಿಲಾಂಗ
ಕಾಯವುಳ್ಳ, ಕಲ್ಯಭಿಧ =ಕ ನಾಮಕನಾದ, ಭೋ (ಹರೇ) ಹೇ ಹರಿಯೇ,
ನಿಜಂ =ಆತ್ಮೀಯನಾದ, ಮಾಂ =ನನ್ನನ್ನು, ಅದ್ದಾ =ಚೆನ್ನಾಗಿ, ಅವ -ರಕ್ಷಿಸು.
 
=
 
ಕಾಂತಿಯಿಂದ ಬೆಳಗುವ
 
32
 
(ತತ್ವ ತ್ವದ್ದಾಂಜಸಾ ದ್ವಯಂ' (ಅಮರ)
 
ಶುದ್ಧೋದನ ಎಂಬಲ್ಲಿ ಪೃಷೋದರತಾತ್ ಸಾಧುಪ್ರಯೋಗವೆಂದು ತಿಳಿಯಬೇಕು.
 
=