This page has been fully proofread once and needs a second look.

ಕೃಷ್ಣಾದಿ ಪಾಂಡುಸುತ ಕೃಷ್ಣಾಮ​ನಃ ಪ್ರಚುರ ತೃಷ್ಣಾಸುತೃಪ್ತಿಕರವಾಕ್

ಕೃಷ್ಣಾಂಕಸಾಽಽಲಿರತ, ಕೃಷ್ಣಾಭಿಧಾಘಹರ ಕೃಷ್ಣಾದಿ ಷಣ್ಮ ಹಿಲ ಭೋಃ ।

ಪುಷ್ಪಾಣಾತು ಮಾಜಿತ ನಿಷ್ಣಾತವಾರ್ಧಿಮುದನುಷ್ಠಾಂಣಾಂಶು ಮಂಡಲ ಹರೇ

ಜಿಷ್ಣೋ ಗಿರೀಂದ್ರಧರ ವಿಷ್ಟೋಣೋ ವೃಷಾವರಜ ದೃಷ್ಟೊಣೋ ಭವಾನ್
 
ಕರುಣಯಾ
 

 
ತಾ :
 
ಪಾಂಡವರ ಮತ್ತು ದೌದ್ರೌಪದಿಯ ಮನದ ಬಯಕೆಯನ್ನು (ದುರ್ಯೋ

ಧನನ ಸಂಹಾರ) ಪೂರೈಸುವಂತೆ ಮಾಡುವೆನೆಂದು ಮಾತುಕೊಟ್ಟವನೂ, ಶಂಖ

ಚಕ್ರಾದಿ ವೈಷ್ಣವಚಿಹ್ನೆಗಳನ್ನು ಧರಿಸಿದ ಭಕ್ತಜನರ ಪಕ್ಷಪಾತಿಯೂ, (ರುಕ್ಷ್ಮಿಣೀ

ಸತ್ಯಭಾಮೆಯರಲ್ಲದೆ) ಕಾಳಿಂದೀ ಮೊದಲಾದ ಆರುಮಂದಿ ರಾಣಿಯರುಳ್ಳವನೂ,

ಪಾಪಹರನೂ, ಏಕಾಂತಭಕ್ತರೆಂಬ ಕಡಲಿಗೆ ಮುದವುಕ್ಕಿಸುವ ಪೂರ್ಣಚಂದ್ರನೂ,

ಜಯಶೀಲನೂ, ಗೋವರ್ಧನಗಿರಿಧಾರಿ, ವ್ಯಾಪ್ತ, ಉಪೇಂದ್ರ, ಧೈರ್ಯಶಾಲಿಯೂ

ಆದ ಶ್ರೀಕೃಷ್ಣ ಪರಮಾತ್ಮಾ ! ದಯಮಾಡಿ ನನಗೆ ಏಳೆ ಯಾಗುವಂತೆ ಹರಸು.
 
10
 

 
ಪ್ರ. ಪ : ಕೃಷ್ಣಾದಿ ಪಾಂಡುಸುತ= ಅರ್ಜುನ (ಅಥವಾ) ಭೀಮ ಮೊದ

ಲಾದ ಪಾಂಡವರ ಮತ್ತು ಕೃಷ್ಣಾ = ದೌಪದಿಯ, ಮನಃಪ್ರಚುರತೃಷ್ಣಾ= ಮನಸ್ಸಿ

ನಲ್ಲಿರುವ ಕೌರವವಧ ಮುಂತಾದ ಹಲವು ಆಸೆಗಳನ್ನು ನೆರವೇರಿಸುವಂಥ, ಸುತೃಪ್ತಿಕರ
ವಾಕ್ = ನೆಮ್ಮದಿ ಕೊಡುವಂಥ ಮಾತುಕೊಟ್ಟವನೇ, ಕೃಷ್ಣಾಂಕಪಾಲಿರತ= ಕೃಷ್ಣನ
ಶಂಖಚಕ್ರಾದಿ ಚಿಹ್ನೆ ಧರಿಸಿಕೊಳ್ಳುವ ಸಜ್ಜನ ವೈಷ್ಣವರಲ್ಲಿ, ನಿರತನೆ, (ಅಥವಾ
ಕಾಳಿಂದಿಯ ತೊಡೆಯಲ್ಲಿ ವಿಹರಿಸುವವನೆ) ಅಘಹರ= ಪಾಪನಿವಾರಕನೆ, ಕೃಷ್ಣಾದಿ
ಷಣ್ಮಹಿಲ -ಕಾಳಿಂದೀ, ಭದ್ರಾ, ನೀಲಾ, ಮಿತ್ರವಿಂದಾ, ಲಕ್ಷಣಾ, ಜಾಂಬವತಿ ಈ
ಆರುಮಂದಿ ಅರಸಿಯರುಳ್ಳವನೆ, ಅಜಿತ= ಸೋಲಿಲ್ಲದವನೆ, ನಿಷ್ಣಾತ ವಾರ್ಧಿಮುದನು
ಇಾಂ
ಷ್ಣಾಂಶು ಮಂಡಲ =ನಿಷ್ಠೆಯಿಂದಿರುವ ಭಕ್ತಸಾಗರದ ಸಂತಸ ಉಕ್ಕಿಸುವ ಚಂದ್ರಬಿಂಬ

ವೆನಿಸಿದ, ಜಿಷ್ಟೋ= ಜಯಶಾಲಿಯೆ, ಗಿರೀಂದ್ರಧರ= ಗೋವರ್ಧನವನ್ನೆತ್ತಿ ಹಿಡಿದವನೆ,
ವಿಷ್ಣೋ= ವ್ಯಾಪ್ತನೆ, ವೃಷಾವರಜ = ಇಂದ್ರನ ತಮ್ಮನೆನಿಸಿದ, ದೃಷ್ಟೋಣೋ = ಜಯ
ಶೀಲನಾದ, ಕೃಷ್ಣಾಭಿಧ - =ಕೃಷ್ಣ ಎಂಬ ಪರಮಾತ್ಮಾ !
ಭೋ ಹರೇ= ಎಲೈಹರಿಯೇ, ಕರುಣಯಾ= ದಯೆಯಿಂದ, ಮಾಂ =ನನ್ನನ್ನು, ಪುಷ್ಪಾಣಾತು
= ಹರಸು.
(ಇಲ್ಲಿ ಎಲ್ಲ ಸಂಬುದ್ಧಿ ಇರುವುದರಿಂದ ಭವಾನ್ =ನೀನು, ಎಂಬುದು ಅಧ್ಯಾಹಾರ್ಯ)
 
-
 
-
 
ಭೋ ಹರೇ
 
ಎಲೈ
 
ಹರಸು.
 
-
 

 
ಇದರಲ್ಲಿ ಪಾಂಡವರ ಹಿತಚಿಂತಕ, ವೈಷ್ಣವದೀಕ್ಷಾಬದ್ಧರಲ್ಲಿ ಪಕ್ಷಪಾತಿ, ರುಕ್ಷ್ಮಿಣಿ
ಣೀ
ಸತ್ಯಭಾಮೆಯರು ಮತ್ತು ಉಳಿದ ಆರುಮಂದಿ ಮಹಿಷಿಯರ ಅರಸ, ತನ್ನ ಏಕಾಂತಭಕ್ತ
ರಿಗೆ ಹರ್ಷದಾಯಕ ಮುಂತಾದ ಕೃಷ್ಣನ ಗುಣಗಳ ಉಲ್ಲೇಖವಿದೆ.
 

 
ಕೃಷ್ಣಾ೦ಕಪಾಲಿರತ = ಯಮುನೆಯ ಅಥವಾ ಕಾಳಿಂದಿಯ ಆಲಿಂಗನದಲ್ಲಿ ನಿರತನಾದ
ವನು, ಎಂಬ ಅರ್ಥವೂ ಆಗಬಹುದು. ವಾಸವೋ ವೃತ್ರ​ಹಾ ವೃಷಾ (ಆಮರ).
 
28