This page has been fully proofread once and needs a second look.

ರಾಜೀವನೇತ್ರ ವಿದುರಾಜೀವ ಮಾಮವತು ರಾಜೀವ ಕೇತನ ವಶಂ

ವಾಜೀಭಪತ್ತಿ ನೃಪರಾಜೀರಥಾನ್ವಿತ ಜರಾಜೀವಗರ್ವಶಮನ ।

ವಾಜೀಶವಾಹ ಸಿತವಾಜೀಶ ದೈತ್ಯತನುವಾಜೀಶಭೇದಕರದೋ-

ರ್ಜಾಜೀಕದಂಬನವರಾಜೀವ ಮುಖ್ಯಸುಮರಾಜೀಸುವಾಸಿತ
 
ಶಿರಃ ॥ ೨೬ ॥
 

 
ತಾಃ
ಜ್ಞಾನಿಗಳಿಗೆ ಜೀವನಾಧಾರಭೂತನಾದ ರಕ್ಷಕನೆ, ಚತುರಂಗಬಲೋ
ವೇ

ಪೇ
ತನೂ ರಾಜರ ಸಹಾಯವುಳ್ಳವನೂ ಆಗಿದ್ದ ಆ ಜರಾಸಂಧನ ಗರ್ವವನ್ನು ಮುರಿ
ದವನೆ, ಗರುಡವಾಹನ, ಪಾರ್ಥನ ಸ್ವಾಮಿ, ಕುದುರೆಯ ರೂಪತಳೆದು ಬಂದ ಕೇ
ಶಿ ಎಂಬ ದಾನವನನ್ನು ಕೊಂದವನೆ, ಜಾಜಿ, ಬಯನೆ, ಹೊಸ ತಾವರೆ ಹೂವುಗಳಿಂದ
ಪರಿಮಳ ತುಂಬಿದ ಕೇಶವುಳ್ಳ ತಾವರೆಗಣ್ಣನಾದ ಕೃಷ್ಣ ನನ್ನನ್ನು ಕಾಮಬಾಧೆ
ಯಿಂದ ರಕ್ಷಿಸು.
 

 
ಪ್ರ. ಪ : ರಾಜೀವನೇತ್ರ = ತಾವರೆಗಣ್ಣನೆ, ವಿದುರಾಜೀವ =
ಜ್ಞಾನಿಗಳಿಗೆ
 
ಪ್ರ. ಪ : ರಾಜೀವನೇತ್ರ = ತಾವರೆಗಣ್ಣನೆ, ವಿದುರಾಜೀವ

(ಅಥವಾ ವಿದುರನಿಗೆ ಜೀವನಾಧಾರಭೂತನಾದ ರಕ್ಷಕನೆ, ವಾಜಿ = ಕುದುರೆ, ಇಭ
= ಆನೆ, ಪತ್ತಿ = ಕಾಲಾಳು, ನೃಪರಾಜೀ= ರಾಜರ ಸೈನ್ಯ, ರಥ= ತೇರು ಇವುಗಳಿಂದ,
ಅನ್ವಿತ= ಕೂಡಿದ, ಜರಾಜೀವ =ಜರೆಯಿಂದ ಬದುಕಿಸಲ್ಪಟ್ಟ ಜರಾಸಂಧನ, ಗರ್ವ
ಶಮನ = ಮದವನ್ನು ಮುರಿದವನೆ, ವಾಜೀಶವಾಹ= ಗರುಡವಾಹನನೆ (ನಗೌಕೋ
ವಾಜಿ ವಿಕಿರಃ), ತವಾಜೀಶಸಿತವಾಜೀಶ= ಶ್ವೇತವಾಹನನಾದ ಪಾರ್ಥನ ಸ್ವಾಮಿಯೆ, ದೈತ್ಯತನು
ವಾಜೀಶ
ವಾಜೀಶ= ಕುದುರೆಯ ರೂಪದಲ್ಲಿ ಬಂದ ಕೇಶಿ ಎಂಬ ದೈತ್ಯನ ಶರೀರವನ್ನು, ಭೇದ
ಕರದೋಃ =ಭೇದಿಸಿದ ತೋಳುಗಳುಳ್ಳವನೆ, ಜಾಜೀ =ಜಾಜಿಹೂವು, ಕದಂಬ
=ಬಯನೆ, ನವ ರಾಜೀವ= ಹೊಸ ತಾವರೆ, ಮುಖ್ಯ =ಮುಂತಾದ, ಸುಮರಾಜಿ
= ಹೂವುಗಳಿಂದ, ಸುವಾಸಿತಶಿರಃ = ಪರಿಮಳಿತವಾದ ತಲೆಗೂದಲುಳ್ಳ, ಶ್ರೀಕೃಷ್ಣ,
(ಭವಾನ್ =ನೀನು), ರಾಜೀವಕೇತನ ವಶಂ= ಮೀನಕೇತನನಾದ ಮನ್ಮಥನ ಅಧೀನ
ನಾದ, ಮಾಂ= ನನ್ನನ್ನು, (ರಾಜೀವಃ ಶಕುಲಸ್ತಿಮಿಃ), ಅವತು =ರಕ್ಷಿಸು. (ಎಲ್ಲವು
ಸಂಬುದ್ಧಿ ಆದ್ದರಿಂದ ಭವಾನ್ ಎಂಬುದಿಲ್ಲಿ ಅಧ್ಯಾಹಾರ)
 
=
 
26
 
===
 

 
ಜರಾಸಂಧ ವಧೆ, ಕೇಶಿಗರ್ವಮರ್ದನ, ಮುಂತಾದ ಭಾಗವತದ ಕತೆ ಇಲ್ಲಿ
 

ಸೂಚಿತವಾಗಿದೆ.
 
=
 

 
( ಜ್ಞಾತಾ ತು ವಿದುರೋ ವಿಂದುಃ' (ಅಮರ)