This page has not been fully proofread.

ರಾಜೀವನೇತ್ರ ವಿದುರಾಜೀವ ಮಾಮವತು ರಾಜೀವ ಕೇತನ ವಶಂ
ವಾಜೀಭಪತ್ತಿ ನೃಪರಾಜೀರಥಾನ್ವಿತ ಜರಾಜೀವಗರ್ವಶಮನ ।
ವಾಜೀಶವಾಹ ಸಿತವಾಜೀಶ ದೈತ್ಯತನುವಾಜೀಶಭೇದಕರದೋ-
ರ್ಜಾಜೀಕದಂಬನವರಾಜೀವ ಮುಖ್ಯಸುಮರಾಜೀಸುವಾಸಿತ
 
ಶಿರಃ ॥ ೨೬ ॥
 
ಜ್ಞಾನಿಗಳಿಗೆ ಜೀವನಾಧಾರಭೂತನಾದ ರಕ್ಷಕನೆ, ಚತುರಂಗಬಲೋ
ವೇತನೂ ರಾಜರ ಸಹಾಯವುಳ್ಳವನೂ ಆಗಿದ್ದ ಆ ಜರಾಸಂಧನ ಗರ್ವವನ್ನು ಮುರಿ
ದವನೆ, ಗರುಡವಾಹನ, ಪಾರ್ಥನ ಸ್ವಾಮಿ, ಕುದುರೆಯ ರೂಪತಳೆದು ಬಂದ ಕೇಶ
ಎಂಬ ದಾನವನನ್ನು ಕೊಂದವನೆ, ಜಾಜಿ, ಬಯನೆ, ಹೊಸ ತಾವರೆ ಹೂವುಗಳಿಂದ
ಪರಿಮಳ ತುಂಬಿದ ಕೇಶವುಳ್ಳ ತಾವರೆಗಣ್ಣನಾದ ಕೃಷ್ಣ ನನ್ನನ್ನು ಕಾಮಬಾಧೆ
ಯಿಂದ ರಕ್ಷಿಸು.
 
ಜ್ಞಾನಿಗಳಿಗೆ
 
ಪ್ರ. ಪ : ರಾಜೀವನೇತ್ರ = ತಾವರೆಗಣ್ಣನೆ, ವಿದುರಾಜೀವ
(ಅಥವಾ ವಿದುರನಿಗೆ ಜೀವನಾಧಾರಭೂತನಾದ ರಕ್ಷಕನೆ, ವಾಜಿ = ಕುದುರೆ, ಇಭ
ಆನೆ, ಪ ಕಾಲಾಳು, ನೃಪರಾಜೀ= ರಾಜರ ಸೈನ್ಯ, ರಥ= ತೇರು ಇವುಗಳಿಂದ,
ಅನ್ವಿತ ಕೂಡಿದ, ಜರಾಜೀವ ಜರೆಯಿಂದ ಬದುಕಿಸಲ್ಪಟ್ಟ ಜರಾಸಂಧನ, ಗರ್ವ
ಶಮನ = ಮದವನ್ನು ಮುರಿದವನೆ, ವಾಜೀಶವಾಹ ಗರುಡವಾಹನನೆ (ನಗೌಕೋ
ವಾಜಿ ವಿಕಿರಃ), ತವಾಜೀಶ ಶ್ವೇತವಾಹನನಾದ ಪಾರ್ಥನ ಸ್ವಾಮಿಯೆ, ದೈತ್ಯತನು
ವಾಜೀಶ ಕುದುರೆಯ ರೂಪದಲ್ಲಿ ಬಂದ ಕೇಶಿ ಎಂಬ ದೈತ್ಯನ ಶರೀರವನ್ನು, ಭೇದ
ಕರದೋಃ ಭೇದಿಸಿದ ತೋಳುಗಳುಳ್ಳವನೆ, ಜಾಜೀ ಜಾಜಿಹೂವು, ಕದಂಬ
ಬಯನೆ, ನವ ರಾಜೀವ ಹೊಸ ತಾವರೆ, ಮುಖ್ಯ ಮುಂತಾದ, ಸುಮರಾಜಿ
ಹೂವುಗಳಿಂದ, ಸುವಾಸಿತಶಿರಃ = ಪರಿಮಳಿತವಾದ ತಲೆಗೂದಲುಳ್ಳ, ಶ್ರೀಕೃಷ್ಣ,
(ಭವಾನ್ ನೀನು), ರಾಜೀವಕೇತನ ವಶಂ= ಮೀನಕೇತನನಾದ ಮನ್ಮಥನ ಅಧೀನ
ನಾದ, ಮಾಂ= ನನ್ನನ್ನು, (ರಾಜೀವಃ ಶಕುಲಸ್ತಿಮಿಃ), ಅವತು =ರಕ್ಷಿಸು. (ಎಲ್ಲವು
ಸಂಬುದ್ಧಿ ಆದ್ದರಿಂದ ಭವಾನ್ ಎಂಬುದಿಲ್ಲಿ ಅಧ್ಯಾಹಾರ)
 
=
 
26
 
===
 
ಜರಾಸಂಧ ವಧೆ, ಕೇಶಿಗರ್ವಮರ್ದನ, ಮುಂತಾದ ಭಾಗವತದ ಕತೆ ಇಲ್ಲಿ
 
ಸೂಚಿತವಾಗಿದೆ.
 
=
 
( ಜ್ಞಾತಾ ತು ವಿದುರೋ ವಿಂದುಃ' (ಅಮರ)