This page has been fully proofread once and needs a second look.

ತೂಣೀರ ಕಾರ್ಮುಕ ಕೃಪಾಣೀಕಿಣಾಂಕ ಭುಜಪಾಣೀ ರವಿಪ್ರತಿಮಭಾ
ಕೊ
ಭಾಃ
ಕ್ಷೋ
ಣೀಧರಾಲಿನಿಭ ಘೋಣೀಮುಖಾದಿ ಘನವೇಣೀ ಸುರಕ್ಷಣಕರಃ ।

ಶೋಣೀಭವನ್ನಯನ ಕೋಣೀಜಿತಾಂಬುನಿಧಿ ಪಾಣೀರಿತಾರ್ಹಣಮಣಿ-

ಶ್ರೇಣೀವೃತಾಂಫ್ಘ್ರಿರಿಹ ವಾಣೀಶಸೂನುವರವಾಣೀಸ್ತುತೋ ವಿಜಯತೇ ॥೧೯॥
 

 
ತಾ : ಬತ್ತಳಿಕೆ, ಬಿಲ್ಲು, ಖಡ್ಗ ಇವನ್ನು ಹಿಡಿದು ಹಿಡಿದು ಜಡ್ಡು ಗಟ್ಟಿದ

ತೋಳು ಮತ್ತು ಕೈಗಳುಳ್ಳವನಾದರೂ ರಾಮ ಸೂರ್ಯನಂತೆ ಪ್ರಖರವಾದ ತೇಜ

ಸುಳ್ಳವನು. ಪರ್ವತದಂತೆ ಮಹಾಕಾಯರಾದ ಕಪಿಗಳ ಸೈನ್ಯದ ರಕ್ಷಣೆಯ ಭಾರ

ಹೊತ್ತವನು, ಒಮ್ಮೆ ಕೋಪದಿಂದ ಕಣ್ಣು ಕೆಂಪಗಾದಾಗ ಸಮುದ್ರದೇವ ಶ್ರೀರಾಮನ
ಪಾದಗಳನ್ನು ಮುಚ್ಚುವಷ್ಟು ರತ್ನರಾಶಿಗಳನ್ನು ಉಪಹಾರವಾಗಿ ತಂದು ಸುರಿಯ
ಲಿಲ್ಲವೆ? ಮೂಲರಾಮಾಯಣದಂಥ ರಾಮಚರಿತೆಯನ್ನು ಹಾಡುವುದರಲ್ಲಿ ಕೃತಾರ್ಥ
ನಾದವನು ಹನುಮಂತ,. ಇಂಥ ಮರ್ಯಾದಾ ಪುರುಷೋತ್ತಮನಾದ ರಾಮನೇ
ಸರ್ವೋತ್ಕೃಷ್ಟನಾದ ಭಗವಂತ.
 
-
 

 
ಪ್ರ. ಪ :
ತೂಣೀರ ಕಾರ್ಮುಕ ಕೃಪಾಣೀ = ಬತ್ತಳಿಕೆ, ಬಿಲ್ಲು, ಖಡ್ಗ

ಇವುಗಳನ್ನು ಧರಿಸುವುದರಿಂದುಂಟಾದ, ಕಿಣಾಂಕ ಭುಜಪಾಣಿಃ := ಕಲೆಯಿಂದ ಅಂಕಿತ
ವಾದ ತೋಳು ಕೈಗಳುಳ್ಳವನೂ, ರವಿಪ್ರತಿಮ ಭಾಃ = ಸೂರ್ಯಸಮಾನವಾದ
 
=
 
ತೇಜೋವಂತನೂ, ಕೊಕ್ಷೋಣೀಧರಾಲಿ ನಿಭ= ಪರ್ವತಶ್ರೇಣಿಯಂತಿರುವ, ಘೋಣಿ
ಣೀಮುಖಾದಿ= ಕಪಿಗಳೇ ಮೊದಲಾದವರ, ಘನವೇಣಿ =ಮಹಾಸೇನೆಯ, ಸುರಕ್ಷಣ
ಕರಃ =ರಕ್ಷಣೆ ಮಾಡುವವನೂ, ಶೋಣೀಭವತ್ = ಕ್ರೋಧದಿಂದ ಕೆಂಪಾದ, ನಯನ
ಕೋಣೀಜಿತ =ಕಡೆಗಣ್ಣ ನೋಟದಿಂದಲೇ ವಶಂವದನಾದ, ಅಂಬುನಿಧಿ =ಸಮುದ್ರಾಭಿ
ಮಾನಿ ವರುಣನ, ಪಾಣಿ =ಕೈಗಳಿಂದ, ಈರಿತ =ಒಪ್ಪಿಸಲ್ಪಟ್ಟ, ಅರ್ಹಣಮಣಿಶ್ರೇಣಿ
=
ಉಪಹಾರರೂಪವಾದ ರತ್ನರಾಶಿಯಿಂದ,
ವೃತಾಂಘ್ರಿಃ =ಮುಚ್ಚಲ್ಪಟ್ಟ ಪಾದ

ಗಳುಳ್ಳವನೂ, ವಾಣೀಶಸೂನು=
ಭಾರತೀಪುತ್ರನಾದ ಹನುಮಂತನ, ವರವಾಣಿ

ಸ್ತುತಃ =
ಮೂಲರಾಮಾಯಣಾದಿ ವರ್ಣನೆಗಳಿಂದ ಕೊಂಡಾಡಲ್ಪಟ್ಟವನೂ ಆದ

ರಾಮಚಂದ್ರನೇ, ವಿಜಯತೇ = ಸರ್ವೋತ್ಕೃಷ್ಟನಾದ ಸ್ವಾಮಿ, (ವಾಣೀಶ ಸೂನು

ಎಂಬಲ್ಲಿ ಜಾಂಬವಂತನಿಂದ ಸ್ತುತನಾದವನೆಂದೂ ಅರ್ಥ).
 
ಗಳುಳ್ಳವನೂ, ವಾಣೀಶಸೂನು
ಸ್ತುತಃ
 
-
 

 
ಇದರಲ್ಲಿ ರಾಮನ ರೂಪ ಗುಣಗಳಲ್ಲದೆ, ಕಪಿಸೈನ್ಯದ ರಕ್ಷಕ, ಎಂಬುದೂ ಸೇತು

ರಚಿಸಲು ಸಮುದ್ರ ದಾರಿ ಬಿಡದಿರುವಾಗ ರಾಮನಿಗೆ ಉಂಟಾದ ಕ್ರೋಧ, ವರುಣನ
ಶರಣಾಗತಿ, ಹನುಮಂತ ಮಾಡಿದ ರಾಮಸ್ತುತಿ ಇವು ಸೂಚಿತವಾಗಿವೆ.
 

 
ಘೋಣಿಣೀ= ಹಂದಿ, ಕಪಿ,
 
19