This page has been fully proofread once and needs a second look.

ತಾ:
 

 
ದಾಂತಂ, ದಶಾನನಸುತಾಂತಂ, ಧರಾಮಧಿವಸಂತಂ, ಪ್ರಚಂಡ ತಪಸಾ
ಕಾಂ

ಕ್ಲಾಂ
ತಂ, ಸಮೇತ್ಯ ವಿಪಿನಾಂತಂ ತ್ವವಾಪ​ ಯಮನಂತಂ, ತಪಸ್ವಿಪಟಲಮ್ ॥

ಯಾಂತಂ, ಭವಾರತಿ ಭಯಾಂತಂ ಮನಾತುಮಾಶು ಭಗವಂತಂ ಭರೇಣ ಭಜತಾತ್

ಸ್ವಾಂತಂ ಸವಾರಿದನುಜಾಂತಂ ಧರಾಧರನಿಶಾಂತಂ ಸತಾಪಸವರನ್ ಮ್ ೧೬ ॥

 
ತಾ:
ಜಿತೇಂದ್ರಿಯರೂ, ಕಠಿನತಪಸ್ಸಿನಿಂದ ಕೃಶಾಂಗರೂ ಆದ ತಾಪಸರು,

ರಾವಣನಿಂದ ತುಂಬ ಪೀಡಿತರಾಗಿ, ನೆಲದ ಮೇಲೆ ನಡೆದಾಡುವ ದೇವರು ಅರಣ್ಯಕ್ಕೆ
ಹೋದನೆಂಬ ಸುದ್ದಿ ತಿಳಿದು ಅನಾದಿ ನಿಧನನೂ, ನಾರಾಯಣನೂ ಆದ ಯಾವ
ನಿನ್ನನ್ನು ಹೊಂದಿ ಸಾಂಸಾರಿಕ ದುಃಖವನ್ನೂ ಭೀತಿಯನ್ನೂ ಕಳೆದುಕೊಂಡರೋ;
ಯಜ್ಞಕ್ಕೆ ಶತ್ರುಭೂತರಾದ ರಕ್ಕಸರನ್ನು ಕೊಂದು, ಚಿತ್ರಕೂಟಾದ್ರಿಯ ಗುಡಿಸಲಿ
ನಲ್ಲಿ, ತಾಪಸರೊಡನಿರುವ, ಆ ಭಗವಂತನಾದ ನಿನ್ನನ್ನು ನನ್ನ ಅಂತರಂಗವು ಕಾಲ
ವಿಲಂಬ ಮಾಡದೆ ಭಕ್ತಿಭಾರದಿಂದ ಭಜಿಸಲಿ,
 

 
ಪ್ರ. ಪ: ದಾಂತಂ = ಜಿತೇಂದ್ರಿಯರಾದ, ಪ್ರಚಂಡ ತಪಸಾ = ಘೋರ

ತಪಸ್ಸಿನಿಂದ, ಕಾಂತಂ =ಕ್ಷೀಣರಾದ; ದಶಾನನ ಸುತಾಂತಂ = ರಾವಣನಿಂದ ಬಹಳ
ತೊಂದರೆಗೊಳಗಾದ, ತಪಸ್ವಿಪಟಲಂ =ತಾಪಸರ ಗುಂಪು, ಧರಾಮಧಿವಸಂತಂ= ಈ
ನೆಲದಲ್ಲಿ ಇರುವ, ವಿಪಿನಾಂತಂ = ಈಗ ವನಪ್ರಾಂತಕ್ಕೆ, ಯಾಂತಂ =ಬರುತ್ತಿರುವ,
ಯಂ ಅನಂತಂ= ಅನಾದಿ ನಿಧನನಾದ ಯಾವ ನಾರಾಯಣನನ್ನು, ಸಮೇತ್ಯ =ಬಳಿ

ಸಾರಿ, ಭವ -=ಸಂಸಾರದ, ಅರತಿ ಭಯಾಂತಂ= ದುಃಖ ಮತ್ತು ಭೀತಿಗಳ ವಿನಾಶ
ವನ್ನು, ತು. ಆಪ =ಹೊಂದಿದರೋ (ಸಾಂಸಾರಿಕ ದುಃಖದಿಂದ ಮುಕ್ತರಾದರೋ),
ಸವಾರಿ (ಸವ, ಅರಿ) ದನುಜಾಂತಂ =ಯಜ್ಞ ವಿರೋಧಿಗಳಾದ ರಕ್ಕಸರ ನಾಶಕನೂ,
ಧರಾಧರ ನಿಶಾಂತಂ= ಚಿತ್ರಕೂಟ ಪರ್ವತದ ಉಟಜದಲ್ಲಿರುವವನೂ,
 
ಸತಾಪಸ
 
-
 
ವರಂ
 
=ತಾಪಸಶ್ರೇಷ್ಠರಿಂದ ಸಹಿತನೂ ಆದ, (ತಂ) ಭಗವಂತಂ = ಆ ಪರಮಾತ್ಮ
ನಾದ ನಿನ್ನನ್ನು, ಮಮ =ನನ್ನ, ಸ್ವಾಂತಂ= ಮನಸ್ಸು, ಆಶು= ಬೇಗನೆ, ಭರೇಣ
=ತೀವ್ರವಾಗಿ (ಅಥವಾ ಭಕ್ತಿಭಾರದಿಂದ) ಭಜತಾತ್ =ಸೇವಿಸಲಿ, (ಭಜ
=ಸೇವಾಯಾಂ, ಲೋಟ್ )
 
16
 
=
 
-
 

 
ಇದರಲ್ಲಿ ಶರಭಂಗ, ಸುತೀಕ್ಷ್ಯ ಮೊದಲಾದ ಮುನಿಗಳಿಗೆ ತನ್ನ ದರ್ಶನವಿತ್ತು

ಮುಕ್ತಿಯನ್ನು ಕೊಟ್ಟದ್ದು. ಚಿತ್ರಕೂಟದ ಸರಹದ್ದಿನಲ್ಲಿರುವ ಮುನಿಗಳ ಭೇಟಿ,

ಅರಣ್ಯವಾಸ ಈ ಘಟನೆಗಳ ಉಲ್ಲೇಖವಿದೆ.
 

 
ಸವ =
ಯಜ್ಞ, ಅರಿ = ಶತ್ರು ಸವಾರಿ ಯಜ್ಞವಿರೋಧಿ

ಧರಾಧರ ನಿಶಾಂತಂ= (ಚಿತ್ರ ಕೂಟ) ಪರ್ವತವೇ ಮನೆ ( ನಿಶಾಂತಂ) ಯಾಗುಳ್ಳ.