This page has not been fully proofread.

ಓಂ ಶ್ರೀ ನೃಸಿಂಹಾಯ ನಮಃ
 
ದಂಭೋಲಿ ತೀಕ್ಷನಖ ಸಂಭೇದಿತೇಂದ್ರರಿಪು' ಕುಂಭೀಂದ್ರ ಪಾಹಿ ಕೃಪಯಾ
ಸಂಭಾರ್ಭಕಾಸಹನ ಡಿಂಭಾಯ ದತ್ತವರ ಗಂಭೀರನಾದ! ಬೃಹರೇ!
ಅಂಭೋಧಿಜಾನುಸರಣಾಂಭೋಜಭೂ ಪವನ ಕುಂಭೀನಸೇಶ್ ಖಗರಾಟ್
ಕುಂಭೀಂದ್ರಕೃತ್ತಿಧರ ಜಂಭಾರಿ ಷಣ್ಮುಖಮುಖಾಂಭೋರುಹಾಭಿನುತ
 
ನಾವನ್ !! ೮ ॥
 
ತಾತ್ಪರ್ಯ: ಹಿರಣ್ಯ ಕಶಿಪು ತನ್ನ ಮಗ ಪ್ರಹ್ಲಾದನಿಗೆ ಚಿತ್ರಹಿಂಸೆ ಕೊಡು
ತಿರುವಾಗ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಶ್ರೀಹರಿ ನರಸಿಂಹ ರೂಪದಿಂದ ಕಂಬ
ವೊಡೆದು ಕಾಣಿಸಿಕೊಂಡು, ವಜ್ರದಷ್ಟು ದೃಢವೂ ಹರಿತವೂ ಆದ ತನ್ನ ಉಗುರು
ಗಳಿಂದ ಆ ದೈತ್ಯನ ಹೊಟ್ಟೆಯನ್ನು ಸೀಳಿದನು. ದುಷ್ಟರಲ್ಲಿ ಎಂದೂ ಸಹನೆ ತೋರದೆ
ಸಿಂಹನಾದ ಗೈಯುತ್ತ, ಉಗ್ರರೂಪಿಯಾಗಿ ಕಾಣಿಸಿದ ಆ ನರಸಿಂಹ ಮಗು ಪ್ರಹ್ಲಾದ
ನಿಗೆ ಕರುಣೆದೋರಿ ವರವನ್ನೂ ದಯಪಾಲಿಸಿದ. ಅವನ ಘೋರ ರೂಪವನ್ನು ನೋಡ
ಲಾಗದೆ ಬ್ರಹ್ಮ, ವಾಯು, ಶೇಷ, ಗರುಡ, ಶಿವ, ಇಂದ್ರ, ಷಣ್ಮುಖ ಮೊದಲಾದ
ದೇವತೆಗಳು ಅವನ ಉಗ್ರತೆಯನ್ನು ಶಾಂತಗೊಳಿಸಲು ಲಕ್ಷ್ಮಿ ದೇವಿಯನ್ನು ಮುಂದು
ಮಾಡಿಕೊಂಡು ಬಂದು ಸ್ತುತಿಸಿದರು. ಆಗ ಪ್ರಸನ್ನನಾದ ಆ ನರಸಿಂಹನು ನನ್ನನ್ನು
ದಯೆಯಿಂದ ರಕ್ಷಿಸಲಿ.
 
ಪ್ರತಿಪದಾರ್ಥ : ದಂಭೋಲಿ ತೀಕ್ಷ್ಯನಖ ವಜ್ರದಂತೆ ಹರಿತವಾದ ಉಗು
ರುಗಳಿಂದ, ಸಂಭೇದಿತ ಸೀಳಲ್ಪಟ್ಟ, ಇಂದ್ರರಿಪು ಕುಂಭೀಂದ್ರ= ದೈತ್ಯ ಹಿರಣ್ಯ ಕಶಿಪು
ಎಂಬ ಮದಗಜವುಳ್ಳವನೆ! ಸಂಭಾರ್ಭಕ =ಕಂಬದಿಂದೊಡೆದು ಮೂಡಿದವನೆ (ಆದ್ದ
ರಿಂದ ಕಂಬದ ಮಗುವೆ) ಅಸಹನ= (ದುಷ್ಟ ದೈತ್ಯರಲ್ಲಿ) ಕ್ಷಮಾ ರಹಿತನೆ, ಡಿಂಭಾಯ
 
ಮಗು ಪ್ರಹ್ಲಾದನಿಗೆ, ದತ್ತವರ ವರವಿತ್ತವನೆ, ಗಂಭೀರನಾದ ತುಂಬುದನಿ
ಯುಳ್ಳವನೆ, ಅಂಭೋಧಿಜಾನುಸರಣ = ಲಕ್ಷ್ಮಿ ದೇವಿಯಿಂದ ಅನುಸರಿಸಲ್ಪಟ್ಟ ವನೆ !
ಅಂಭೋಜ ಭೂ ಪದ್ಮಯೋನಿಯಾದ ಬ್ರಹ್ಮ, ಪವನ -ವಾಯುದೇವರು,
ಕುಂಭೀನಸೇಶ ಸರ್ಪರಾಜನಾದ ಶೇಷ, ಖಗರಾಟ್- ಹಕ್ಕಿಗಳೊಡೆಯ ಗರುಡ,
ಕುಂಭೀಂದ್ರ ಕೃತ್ತಿಧರ= ಗಜಚರ್ಮಧರನಾದ ಶಂಕರ, ಜಂಭಾರಿ= ಇಂದ, ಷಣ್ಮುಖ
ಆರು ಮೊಗನಾದ ಕಾರ್ತಿಕೇಯ ಮೊದಲಾದವರ, ಮುಖಾಂಭೋರುಹಾಭಿನುತ =
ಮುಖ ಕಮಲಗಳಿಂದ ಸ್ತುತನಾದ, ನೃಹರೇ- ನರಸಿಂಹನೇ, ಕೃಪಯಾ =ದಯೆ
ಯಿಂದ, ಮಾಂ= ನನ್ನನ್ನು, ಪಾಹಿ ರಕ್ಷಿಸು.
 
=
 
8