This page has been fully proofread once and needs a second look.

ಶಿಕ್ಷಾದಿಯುಗನಙ್ನಾಗಮದೀಕ್ಷಾ ಸುಲಕ್ಷಣ ಪರೀಕ್ಷಾ ಕ್ಷಮಾ ವಿಧಿಸತೀ

ದಾಕ್ಷಾಯಣೀ ಕ್ರಮತಿ ಸಾಕ್ಷಾದ್ರವಾಮಾಽಪಿ ನ ಯದಾಕ್ಷೇಪ ವೀಕ್ಷಣ ವಿಧೇಧೌ

ಪ್ರೇಕ್ಷಾಽಕ್ಷಿಲೋಭಕರ ಲಾಕ್ಷಾರಸೋಕ್ಷಿತ ಪದಾಕ್ಷೇಪ​ಲಕ್ಷಿತಧರಾ

ಸಾಕ್ಷಾರಿತಾತ್ಮತನುಭೂಕಾಕ್ಷಾರಕಾರಿನಿಟಿಲಾಕ್ಷಾಕ್ಷಮಾನವತು ನಃ
 
ಶಿ
 

 
ತಾತ್ಪರ್ಯ : ಶಿಕ್ಷಾ ವ್ಯಾಕರಣಾದಿ ಸಕಲ ವೇದ ವೇದಾಂಗಗಳ ಲಕ್ಷ ಲಕ್ಷಣಜ್ಞೆ

ಯೂ ವಿದ್ಯಾಧಿ ದೇವತೆಯೂ ಆದ ಸರಸ್ವತಿಯಾಗಲಿ, ದಕ್ಷ ಪ್ರಜಾಪತಿಯ ಮಗಳ

ಸತಿಯೇ ಆಗಲಿ, ಅಥವಾ ಸಾಕ್ಷಾತ್ ಲಕ್ಷ್ಮಿ ಯೇ ಇರಲಿ, ವಿಲಾಸ ವೈಯಾರಗಳಲ್ಲಿ

ಯಾರೂ ಈ ನಾರಾಯಣಿಯನ್ನು ಸರಿಗಟ್ಟಲಾರರು. ಈಕೆ ಪ್ರಜ್ಞಾವಂತೆಯೂ

ಹೌದು. ಅರಗಿನ ಕೆಂಪಿನ ಲೇಪದಿಂದ ಕಂಗೊಳಿಸುವ ಹೆಜ್ಜೆಯನ್ನು ಇಟ್ಟಲ್ಲಿ, ಆ

ಚಿಹ್ನೆಯಿಂದ ನೆಲವು ಪುಲಕಗೊಳ್ಳುವಂತಹ ಚೆಲುವೆ. ತನ್ನ ಮಗ ಮನ್ಮಥನನ್ನು

ಸುಟ್ಟು ಬೂದಿಗೈದ ಆ ಹಣೆಗಣ್ಣ ಶಿವನ ಮನಸ್ಸನ್ನೂ ಕಾಮ ವಿಕಾರಕ್ಕೆ ಪಕ್ಕಾಗಿಸಿ,

ಆತ ತನ್ನ ಅಕಾರ್ಯಕ್ಕಾಗಿ ತಾನೇ ನಾಚಿಕೊಳ್ಳುವಂತೆ ಮಾಡಿದ ಧೀರೆ, ಈ ನೀರೆ.
ಆ ನಾರಾಯಣನ ಹೆಣ್ಣು ರೂಪದ ಮೋಹಿನಿಯು ದೀನರಾದ ನಮ್ಮನ್ನು ರಕ್ಷಿಸಲಿ.
 

 
ಪ್ರತಿಪದಾರ್ಥ : ಶಿಕ್ಷಾದಿಯುಕ್ =ಶಿಕ್ಷಾ ವ್ಯಾಕರಣಾದಿಗಳಿಂದ ಕೂಡಿದ, ನಿಗಮ

ದೀಕ್ಷಾ= ವೇದ ವೇದಾಂಗಾದಿಗಳ ಮತ್ತು ನಿಯಮಗಳ ಸುಲಕ್ಷಣ. ಪರೀಕ್ಷಾ

ಕ್ಷಮಾ =ಲಕ್ಷಣಗಳ ಯುಕ್ತಾ ಯುಕ್ತ ಚಿಂತನೆಯಲ್ಲಿ ಸಮರ್ಥಳಾದ, ವಿಧಿ ಸತೀ=

ಬ್ರಹ್ಮನ ಮಡದಿ, ಸರಸ್ವತಿಯಾಗಲಿ, ದಾಕ್ಷಾಯಣೀ =ದಕ್ಷನ ಮಗಳಾದ ಸತೀ

ದೇವಿಯೇ ಇರಲಿ, ಸಾಕ್ಷಾತ್ ರಮಾಪಿ = ಸ್ವಯಂ ಲಕ್ಷ್ಮಿಯೇ ಇರಲಿ,
ಯದಾ
ಕ್ಷೇಪ ವೀಕ್ಷಣ ವಿಧೇಧೌ - ಯಾರ, ಚಿತ್ತ ಚಂಚಲಕರವಾದ ವೈಯಾರದ ದೃಗ್ಯಾಪಾರ
ದಲ್ಲಿ, ನ ಕ್ಷಮತಿ =ಸಮರ್ಥರಲ್ಲವೋ, ಆ ಪ್ರೇಕ್ಷಾ= ಉತ್ಕೃಷ್ಟ ಜ್ಞಾನ ಸಂಪನ್ನೆಯೂ

ಕ್ಷಿಲೋಭಕರ = ಕಣ್ಣನ್ನು ಸೆರೆಹಿಡಿಯುವ,
 
ಯದಾ
 
ಲಾಕ್ಷಾರಸೋಕ್ಷಿತ
 
= ಅರಗಿನ ರಸ
 
ಚಿಹ್ನತವಾದ
 
ಲೇಪಿಸಿದ, ಪದಾಕ್ಷೇಪ = ಹೆಜ್ಜೆಯ ವಿನ್ಯಾಸದಿಂದ, ಲಕ್ಷಿತಧರಾ
= ಚಿಹ್ನತವಾದ
ನೆಲವುಳ್ಳ, ಮತ್ತು ಆಕ್ಷಾರಿತ = ಮಾಡಬಾರದ ಕೆಲಸ ಮಾಡಿ ಲಜ್ಜಿತನನ್ನಾಗಿಸಿದ,
ಆತ್ಮತನುಭೂಕಾಕ್ಷಾರಕಾರಿ = ತನ್ನ ಮಗನಾದ ಮನ್ಮಥನನ್ನು ಬೂದಿಗೈದ, ನಿಟಿಲಾಕ್ಷ
:
= ತನ್ನ ಮಗನಾದ ಮನ್ಮಥನನ್ನು ಬೂದಿಗೈದ,
ಶಿವನುಳ್ಳ, (ಸ್ಮರಹರನನ್ನೂ ಮೋಹಿಸುವ ರೂಪವುಳ್ಳ) ಸಾ -=ಆ ನಾರಾಯಣಿಯು

ಅಕ್ಷಮಾನ್ = ದೀನರಾದ, ನಃ = ನಮ್ಮನ್ನು, ಅವತು = ರಕ್ಷಿಸಲಿ.
 
www.
 
-
 

 
ನಾರಾಯಣನ ಮೋಹಿನೀರೂಪವನ್ನು ನೋಡಿದ ಶಿವನು ಕಾಮಾಸಕ್ತನಾಗಿ

ಅವರಲ್ಲಿ ಶಾಸ್ತಾ ಹುಟ್ಟಿದನೆಂಬ ಕತೆ ಇಲ್ಲಿ ಸೂಚಿತವಾಗಿದೆ.
 

 
ಆಕ್ಷಾರಿತ =ಲೋಕಾಪವಾದದಿಂದ ದೂಷಿತನಾದವನು [ಆಕ್ಷಾರೋಮೈಥುನಂ

ಪ್ರತ್ಯಾಕ್ರೋಶೋ ಜಾತೋsಸ್ಯ ಇತಿವಾ] ಕ್ಷಾರ =ಬೂದಿ, "ಕ್ಷಾರೋ ರಕ್ಷಾ ಚ
"
(ಅಮರ).
 
6