This page has not been fully proofread.

ಶಿಕ್ಷಾದಿಯುಗನದೀಕ್ಷಾ ಸುಲಕ್ಷಣ ಪರೀಕ್ಷಾ ಕ್ಷಮಾ ವಿಧಿಸತೀ
ದಾಕ್ಷಾಯಣೀ ಕ್ರಮತಿ ಸಾಕ್ಷಾದ್ರವಾಪಿ ನ ಯದಾಕ್ಷೇಪ ವೀಕ್ಷಣ ವಿಧೇ ।
ಪ್ರೇಕ್ಷಲೋಭಕರ ಲಾಕ್ಷಾರಸೋಕ್ಷಿತ ಪದಾಪಲಕ್ಷಿತಧರಾ
ಸಾಕ್ಷಾರಿತಾತ್ಮತನುಭೂಕಾರಕಾರಿನಿಟಿಲಾಕ್ಷಾಕ್ಷಮಾನವತು ನಃ
 
ಶಿ
 
ತಾತ್ಪರ್ಯ : ಶಿಕ್ಷಾ ವ್ಯಾಕರಣಾದಿ ಸಕಲ ವೇದ ವೇದಾಂಗಗಳ ಲಕ್ಷ ಲಕ್ಷಣಜ್ಞೆ
ಯೂ ವಿದ್ಯಾಧಿ ದೇವತೆಯೂ ಆದ ಸರಸ್ವತಿಯಾಗಲಿ, ದಕ್ಷ ಪ್ರಜಾಪತಿಯ ಮಗಳ
ಸತಿಯೇ ಆಗಲಿ, ಅಥವಾ ಸಾಕ್ಷಾತ್ ಲಕ್ಷ್ಮಿ ಯೇ ಇರಲಿ, ವಿಲಾಸ ವೈಯಾರಗಳಲ್ಲಿ
ಯಾರೂ ಈ ನಾರಾಯಣಿಯನ್ನು ಸರಿಗಟ್ಟಲಾರರು. ಈಕೆ ಪ್ರಜ್ಞಾವಂತೆಯೂ
ಹೌದು. ಅರಗಿನ ಕೆಂಪಿನ ಲೇಪದಿಂದ ಕಂಗೊಳಿಸುವ ಹೆಜ್ಜೆಯನ್ನು ಇಟ್ಟಲ್ಲಿ, ಆ
ಚಿಹ್ನೆಯಿಂದ ನೆಲವು ಪುಲಕಗೊಳ್ಳುವಂತಹ ಚೆಲುವೆ. ತನ್ನ ಮಗ ಮನ್ಮಥನನ್ನು
ಸುಟ್ಟು ಬೂದಿಗೈದ ಆ ಹಣೆಗಣ್ಣ ಶಿವನ ಮನಸ್ಸನ್ನೂ ಕಾಮ ವಿಕಾರಕ್ಕೆ ಪಕ್ಕಾಗಿಸಿ,
ಆತ ತನ್ನ ಅಕಾರ್ಯಕ್ಕಾಗಿ ತಾನೇ ನಾಚಿಕೊಳ್ಳುವಂತೆ ಮಾಡಿದ ಧೀರೆ, ಈ ನೀರೆ.
ಆ ನಾರಾಯಣನ ಹೆಣ್ಣು ರೂಪದ ಮೋಹಿನಿಯು ದೀನರಾದ ನಮ್ಮನ್ನು ರಕ್ಷಿಸಲಿ.
 
ಪ್ರತಿಪದಾರ್ಥ : ಶಿಕ್ಷಾದಿಯುಕ್ =ಶಿಕ್ಷಾ ವ್ಯಾಕರಣಾದಿಗಳಿಂದ ಕೂಡಿದ, ನಿಗಮ
ದೀಕ್ಷಾ ವೇದ ವೇದಾಂಗಾದಿಗಳ ಮತ್ತು ನಿಯಮಗಳ ಸುಲಕ್ಷಣ ಪರೀಕ್ಷಾ
ಕ್ಷಮಾ ಲಕ್ಷಣಗಳ ಯುಕ್ತಾ ಯುಕ್ತ ಚಿಂತನೆಯಲ್ಲಿ ಸಮರ್ಥಳಾದ, ವಿಧಿ ಸತೀ=
ಬ್ರಹ್ಮನ ಮಡದಿ, ಸರಸ್ವತಿಯಾಗಲಿ, ದಾಕ್ಷಾಯಣೀ ದಕ್ಷನ ಮಗಳಾದ ಸತೀ
ದೇವಿಯೇ ಇರಲಿ, ಸಾಕ್ಷಾತ್ ರಮಾಪಿ ಸ್ವಯಂ ಲಕ್ಷ್ಮಿಯೇ ಇರಲಿ,
ಕ್ಷೇಪ ವೀಕ್ಷಣ ವಿಧೇ ಯಾರ, ಚಿತ್ತ ಚಂಚಲಕರವಾದ ವೈಯಾರದ ದೃಗ್ಯಾಪಾರ
ದಲ್ಲಿ, ನ ಕ್ಷಮತಿ =ಸಮರ್ಥರಲ್ಲವೋ, ಆ ಪ್ರೇಕ್ಷಾ= ಉತ್ಕೃಷ್ಟ ಜ್ಞಾನ ಸಂಪನ್ನೆಯೂ
ಅಲೋಭಕರ = ಕಣ್ಣನ್ನು ಸೆರೆಹಿಡಿಯುವ,
 
ಯದಾ
 
ಲಾಕ್ಷಾರಸೋಕ್ಷಿತ
 
ಅರಗಿನ ರಸ
 
ಚಿಹ್ನತವಾದ
 
ಲೇಪಿಸಿದ, ಪದಾಕ್ಷೇಪ = ಹೆಜ್ಜೆಯ ವಿನ್ಯಾಸದಿಂದ, ಲಕ್ಷಿತಧರಾ
ನೆಲವುಳ್ಳ, ಮತ್ತು ಆಕ್ಷಾರಿತ = ಮಾಡಬಾರದ ಕೆಲಸ ಮಾಡಿ ಲಜ್ಜಿತನನ್ನಾಗಿಸಿದ,
ಆತ್ಮತನುಭೂಕಾರಕಾರಿ ತನ್ನ ಮಗನಾದ ಮನ್ಮಥನನ್ನು ಬೂದಿಗೈದ, ನಿಟಿಲಾಕ್ಷ
: ಶಿವನುಳ್ಳ, (ಸ್ಮರಹರನನ್ನೂ ಮೋಹಿಸುವ ರೂಪವುಳ್ಳ) ಸಾ -ಆ ನಾರಾಯಣಿಯು
ಅಕ್ಷಮಾನ್ ದೀನರಾದ, ನಃ ನಮ್ಮನ್ನು, ಅವತು ರಕ್ಷಿಸಲಿ.
 
www.
 
-
 
ನಾರಾಯಣನ ಮೋಹಿನೀರೂಪವನ್ನು ನೋಡಿದ ಶಿವನು ಕಾಮಾಸಕ್ತನಾಗಿ
ಅವರಲ್ಲಿ ಶಾಸ್ತಾ ಹುಟ್ಟಿದನೆಂಬ ಕತೆ ಇಲ್ಲಿ ಸೂಚಿತವಾಗಿದೆ.
 
ಆಕ್ಷಾರಿತ ಲೋಕಾಪವಾದದಿಂದ ದೂಷಿತನಾದವನು [ಆಕ್ಷಾರೋಮೈಥುನಂ
ಪ್ರತ್ಯಾಕ್ರೋಶೋ ಜಾತೋsಸ್ಯ ಇತಿವಾ] ಕ್ಷಾರ ಬೂದಿ, ಕ್ಷಾರೋ ರಕ್ಷಾ ಚ
(ಅಮರ).
 
6