This page has been fully proofread once and needs a second look.

ಓಂ ನಾರಾಯಣ್ಯೈ ನಮಃ
 
ಕಳ
 

 
ಯಾ ಕ್ಷೀರವಾರ್ಧಿಮಥನಾಕ್ಷೀಣ ದರ್ಪದಿತಿ ಜಾಕ್ಟೋಭಿತಾಮರಗಣಾ।

ಪೇಕ್ಷಾ ಸ್ಪ್ತಯೇ ಜನಿ ವಲಕ್ಷಾಂಶು ಬಿಂಬ ಜಿದತೀಕ್ಷ್ಣಾಲಕಾವೃತ ಮುಖೀ ॥

ಸೂಕ್ಷ್ಮಾವಲಗ್ನ ವಸನಾಽಽಕ್ಷೇಪಕೃತ್ತುಕು ಚ ಕಟಾಕ್ಷಾಕ್ ಮೀಕೃಷಿಕೃತ ಮನೋ

ದೀಕ್ಷಾಸುರಾಹೃತಸುಧಾಕ್ಷಾಣಿ ನೋವತು ಸುರೂಕ್ಷೆೇಕ್ಷಣಾದ್ಧರಿತನುಃ ॥೫॥
 

 
ತಾತ್ಪರ್ಯ: ಹಾಲುಗಡಲನ್ನು ಕಡೆದ ಆಯಾಸದಿಂದಲೂ ದರ್ಪವಡಗದ ಆ

ದೈತ್ಯರ ಕಾಟದಿಂದ ಪೀಡಿತರಾದ ದೇವತೆಗಳ ಇಷ್ಟಾರ್ಥವನ್ನು ಸಲಿಸಲಿಕ್ಕಾಗಿಯೇ
ನಾರಾಯಣ ಸ್ತ್ರೀ ರೂಪದಿಂದ ಅವತರಿಸಿದ. ಸುಳಿಗುರುಳು ನೊಸಲಲ್ಲಿ ತೊನೆದಾಡುವ
ಮತ್ತು ಚಂದ್ರಮುಖಿಯಾದ ಆ ನಾರಾಯಣಿಯು ಬಳುಕುವ ನಡುವಿನಲ್ಲಿ ತೆಳುವಾದ
ಸೀರೆಯನ್ನುಟ್ಟುಕೊಂಡು, ದೇವತೆಗಳಿಗೆ ಅಮೃತವನ್ನು ಕೊಡಬಾರದೆಂಬ ದನುಜರ
ಮನೋಗತವನ್ನು ಕುಚ-ಕಟಾಕ್ಷ ವಿಕ್ಷೇಪಗಳಿಂದ ತರ್ಜಿಸುತ್ತಾ ಬಂದು, ಅವರಿಗರಿ
ವಿಲ್ಲದ ಹಾಗೆ ಅಮೃತವನ್ನು ಅಪಹರಿಸಿ ದೇವತೆಗಳಿಗೆ ಕೊಟ್ಟಳು. ಇಂಥ ಶ್ರೀಹರಿಯ
ನಾರಾಯಣೀ ರೂಪವು ದುರ್ವಿಷಯಗಳ ವೀಕ್ಷಣದಿಂದುಂಟಾಗುವ ಪಾಪಗಳಿಂದ

ನಮ್ಮ ಇಂದ್ರಿಯಗಳನ್ನು ಕಾಪಾಡಲಿ,
 
ಕಾಲದಲ್ಲಿ.
 

 
ಪ್ರತಿಪದಾರ್ಥ : ಕ್ಷೀರವಾರ್ಧಿಮಥನ =ಹಾಲುಗಡಲನ್ನು ಕಡೆದರೂ, ಅಕ್ಷೀಣ

ದರ್ಪ -ಕುಂದದ ದರ್ಪವುಳ್ಳ, ದಿತಿಜ= ದೈತ್ಯರಿಂದ, ಆಕ್ರೋಷೋಭಿತ -ತುಂಬ ವ್ಯಥೆ

ಗೊಳಗಾದ, ಅಮರ ಗಣ =ದೇವತೆಗಳ ಸಮುದಾಯದ, ಅಪೇಕ್ಷಾಪ್ತಯೇ-

ಇಷ್ಟಾರ್ಥ ಸಿದ್ಧಿಗಾಗಿ ಯಾ= ಯಾವ ನಾರಾಯಣಿಯು (ನಾರಾಯಣನ ಸ್ತ್ರೀರೂಪ)
ಅಜನಿ = ಅವತರಿಸಿದಳೋ ಆಕೆ, ವಲಕ್ಷಾಂಶು ಬಿಂಬಜಿತ್ = ಚಂದ್ರಬಿಂಬಕ್ಕಿಂತಲೂ
ಮಿಗಿಲಾದ ಕಾಂತಿಯುಳ್ಳ, ಅತೀಕ್ಷಾಷ್ಣಾಲಕಾವೃತಮುಖೀ= ಮೃದುವಾದ ಗುಂಗುರು
ಗೂದಲು ತುಂಬಿದ ಮೊಗವುಳ್ಳವಳು, ಸೂಕ್ಷ್ಮಾವಲಗ್ನವಸನಾ = ಬಳುಕುವ ನಡುವಿ
ನಲ್ಲಿ ಪಾರದರ್ಶಕವಾದ ಸೀರೆಯುಟ್ಟಿದ್ದಾಳೆ, ಆಕ್ಷೇಪಕೃತ್ = ಮನಸ್ಸನ್ನು ಚಕಿತ
=
ಗೊಳಿಸುವ, ಕುಚ-ಕಟಾಕ್ಷ =ಸ್ತನ ಮತ್ತು ಕುಡಿನೋಟಗಳಿಂದ, ಅಕ್ಷಮಿಮೀಕೃತ
= ಅಸಮರ್ಥವಾಗಿ ಮಾಡಲ್ಪಟ್ಟ, ಮನೋದೀಕ್ಷಾ= ದೇವತೆಗಳಿಗೆ ಅಮೃತವೀಯಬಾರ

ದೆಂಬ ನಿರ್ಧಾರದ, ಅಸುರಾಕೃಹೃತ ಸುಧಾ= ಅಸುರರಿಂದ ಅಮೃತವನ್ನೇ ಅಪಹರಿಸಿ
(ದೇವತೆಗಳಿಗೆ ಕೊಟ್ಟಳು) ದ, ಸಾ =ಆ ಹರಿಯ ಮೋಹಿನೀ ರೂಪವು, ನಃ =ನಮ್ಮ
ಆಕ್ಷಾಣಿ= ಇಂದ್ರಿಯಗಳನ್ನು, ಸುರೂಕ್ಷೇಕ್ಷಣಾತ್= ದುರ್ವಿಷಯಗಳ ದರ್ಶನ
ಮಾತ್ರದಿಂದುಂಟಾಗುವ ಪಾಪಗಳಿಂದ, ಅವತು- ರಕ್ಷಿಸಲಿ.
 

 
ನಾರಾಯಣನು ಮೋಹಿನೀರೂಪದಿಂದ ದೇವತೆಗಳಿಗೆ ಅಮೃತವನ್ನು ಊಡಿಸಿದ
 
--
 

ಸಂದರ್ಭದ ಚಿತ್ರಣವಿದು.
 

 
ವಲಕ್ಷ= ಬಿಳಿ ಬಣ್ಣ, ಅವಲಗ್ನ =ನಡು, ಮಧ್ಯ ಭಾಗ (ದೇಹದಲ್ಲಿ).
 
5