This page has not been fully proofread.

ಓಂ ಧನ್ವಂತರಯೇ ನಮಃ
 
ಧನ್ವಂತರೇ ರುಚಿ ಧನ್ವಂತರೇರಿತರು ಧನ್ವಂಸ್ತರೀ ಭವ ಸುಧಾ-
ಭಾನ್ವಂತರಾವಸಥ, ಮನ್ವಂತರಾಧಿಕೃತ ತನ್ವಂತರೌಷಧ ನಿಧೇ ।
ದನ್ವಂತರಂಗಶುಗದನ್ವಂತವಾಜಿಸು ವಿತನ ಮಾತನಯಾ
ಸೂನ್ನಂತಕಾತ್ಮ ಹೃದಕನ್ವಂತರಾವಯವ ತನ್ನಂತರರ್ತಿ ಜಲಧಾ ।
 
ತಾತ್ಪರ್ಯ: ಸೂರ್ಯನಂತೆ ಹೊಳೆಯುವ ತನುಕಾಂತಿಯುಳ್ಳವನೆ, ಶತ್ರುಗಳನ್ನು
ನಿರ್ಮೂಲ ಮಾಡುವವನೂ, ಚಂದ್ರಮಂಡಲ ಮಧ್ಯವರ್ತಿಯೂ, ಪ್ರತಿ ಮನ್ವಂತರ
ದಲ್ಲೂ ದುಷ್ಟರ ನಿಗ್ರಹ, ಶಿಷ್ಟರ ಅನುಗ್ರಹಕ್ಕಾಗಿ ಈ ನೆಲದಲ್ಲಿ ಅವತರಿಸುವವನೂ,
ದೇವದಾನವರ ಸಂಗ್ರಾಮದಲ್ಲಿ ದಾನವರನ್ನು ಸಂಹರಿಸಿ ಅವರ ತಾಯಿಯಾದ ದನುವಿನ
ಮನಸ್ಸಿಗೆ ವ್ಯಥೆಯುಂಟು ಮಾಡುವವನೂ, ತನ್ನ ಮಗ ಕಾಮನನ್ನು ಹಣೆಗಣ್ಣಿನಿಂದ
ಬೂದಿಗೈದ ಮೃತ್ಯುಂಜಯನ ಮನಸ್ಸನ್ನೂ ಮರುಳುಗೊಳಿಸುವ ಅಂಗಲಾವಣ್ಯದಿಂದೊ
ಪ್ಪುವ ಮೋಹಿನಿ ರೂಪ ತಳೆದವನೂ ಆದ ಹೇ ಧನ್ವಂತರಿಯೇ, ನನ್ನ ದುಃಖದ
ಕಡಲನ್ನು ದಾಟಲು ನೀನೇ ಹರಿಗೋಲಾಗು, ಅಂಬಿಗನಾಗು.
 
ಪ್ರತಿಪದಾರ್ಥ : ಅಂಗರುಚಿ ದೇಹಕಾಂತಿಯಿಂದ, ಧನ್ವಂತರೇ ಸೂರ್ಯ
ನಂತಿರುವವನೆ, ಅರಿತರು ಶತ್ರುಗಳೆಂಬ ಮರಗಳಿಗೆ, ಧನ್ವನ್ =ಮರಳುಗಾಡಾದವನೆ,
ಸುಧಾಭಾನು= ಚಂದ್ರಮಂಡಲದ, ಅಂತರಾವಸಥ ಮಧ್ಯದಲ್ಲಿ ವಾಸವಾಗಿರುವವನೆ,
ಮನ್ವಂತರ= ಸ್ವಾಯಂಭುವಾದಿ ಬೇರೆ ಬೇರೆ ಮನುಗಳ ಕಾಲಾವಧಿಯಲ್ಲಿ, ಅಧಿಕೃತ
ತನ್ವಂತರ ಅವತಾರ ಮಾಡುವವನೆ, ಔಷಧ ನಿಧೇ ಔಷಧಗಳ ನಿಧಿಯೆ, ಆಜಿಷು
=ಯುದ್ಧಗಳಲ್ಲಿ, ದನು =ದಾನವರ ತಾಯಿ ದನುವಿನ, ಅಂತರಂಗ ಮನಸ್ಸಿನಲ್ಲಿ,
ಶುಗುದನ್ವಂತಂ ಅಳಲಿನ ಕಡಲನ್ನು, ವಿತನ್ವನ್, ನಿರ್ಮಿಸುವವನೆ, ಅತನಯಾ
ಕಡಲಿನ ಮಗಳಾದ ಲಕ್ಷ್ಮಯ, ಸೂನು ಮಗನಾದ ಕಾಮನ, ಅಂತಕ
ವೈರಿಯಾದ ರುದ್ರನಿಗೆ, ಆತ್ಮಹತ್ ಮನೋಹರವಾಗಿ ಕಾಣುವಂತೆ, ಅತನು+
ಅಂತರಾವಯವ ತುಂಬಿದ ಅಂಗ ಸೌಷ್ಠವದಿಂದ ಶೋಭಿಸುವ, ತನ್ವಂತರ ಬೇರೆ
(ನಾರಾಯಣಿ ಮೋಹಿನೀ) ರೂಪ ಧರಿಸಿದ, ಹೇ ಧನ್ವಂತರೇ ಧನ್ವಂತರಿ ಸರ
ಮಾತ್ಮನೆ, ಮಮ= ನನ್ನ, ಆರ್ತಿ ಜಲದೌ ದುಃಖ ಸಾಗರವನ್ನು ದಾಟಲು (ನೀನು)
ತರೀಭವ =ತೆಪ್ಪವಾಗು.
 
-
 
ಇದರಲ್ಲಿ ಧನ್ವಂತರಿ ಮತ್ತು ಮೋಹಿನೀ ರೂಪಗಳ ವರ್ಣನೆಯಿದೆ. ಧನ್ವಂತರಿ
" ಧನ್ವಂತರಿರ್ಧಮಕೇತುರಾದಿದೇವೋಂದಿತೇಃಸುತಃ"
ಅಷ್ಟೋತ್ತರ ಶತನಾಮ.
 
ಸೂರ್ಯ,
 
ಸೂರ್ಯ
 
4
 
ತರಿಃ =ದೋಣಿ, ಹರಿಗೋಲು, " ಸ್ತ್ರೀಯಾಂ ನೌರಣಿಸ್ತರಿಃ' (ಆವರ) ನಾರಾಯಣನ
ಮೋಹಿನಿ ರೂಪವನ್ನು ನೋಡಿದ ಕಾಮಾರಿ ಶಿವನಿಗೂ ಕಾಮ ವಿಕಾರವಾಗಿ ಮೋಹಿನಿ
ಯ ಸೆರಗನ್ನು ಹಿಡಿದ ಆಗ ಶಾಸ್ತಾ ಹುಟ್ಟಿದನೆಂಬ ಪುರಾಣ ಕತೆ ಸೂಚಿತವಾಗಿದೆ.